Prithviraj Sukumaran accident : ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಅಪಘಾತಕ್ಕೀಡಾಗಿದ್ದಾರೆ. ಸಿನಿಮಾದ ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ವೇಳೆ ಅವರು ಗಾಯಗೊಂಡಿದ್ದು, ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲ ವಾರಗಳ ಕಾಲ ಬೆಡ್‌ ರೆಸ್ಟ್‌ ಅವಶ್ಯವಿರುವ ಕಾರಣ ಸಲಾರ್‌ ಶೂಟಿಂಗ್‌ನಲ್ಲಿ ವಿಳಂಬವಾಗಬಹುದು ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಹೌದು.. ಪೃಥ್ವಿರಾಜ್ ಸದ್ಯ ಮಲಯಾಳಂನಲ್ಲಿ ‘ವಿಲಾಯತ್ ಬುದ್ಧ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಕೇರಳದ ಮರಯೂರಿನಲ್ಲಿ ನಡೆಯುತ್ತಿದೆ. ಇನ್ನು ಇದೆ ಸಿನಿಮಾದ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣದ ವೇಳೆ ಪೃಥ್ವಿರಾಜ್ ಅವರ ಕಾಲಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ: ಮೊದಲ ಕಿಸ್‌ ಬಳಿಕ ಡೆಟಾಲ್‌ನಿಂದ ಬಾಯಿ ತೊಳೆದಿದ್ದರಂತೆ ಈ ಖ್ಯಾತ ನಟಿ!!


ಗಾಯಗೊಂಡಿದ್ದ ಪೃಥ್ವಿರಾಜ್‌ ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಈ ಸರ್ಜರಿ ನಂತರ ಪೃಥ್ವಿರಾಜ್ ಎರಡು ಮೂರು ವಾರಗಳ ಕಾಲ ಶೂಟಿಂಗ್ ನಿಂದ ದೂರ ಇರಲಿದ್ದಾರೆ. ಪೃಥ್ವಿರಾಜ್ ಗಾಯದಿಂದ ಸಲಾರ್ ತಂಡ ಟೆನ್ಷನ್‌ಗೆ ಒಳಗಾಗಿದೆ.


ಸಲಾರ್‌ ಸಿನಿಮಾದಲ್ಲಿ ಪೃಥ್ವಿರಾಜ್ ವಿಲನ್ ಆಗಿ ನಟಿಸುತ್ತಿದ್ದಾರೆ. ವರದರಾಜ ಮನ್ನಾರ್ ಎಂಬ ದರೋಡೆಕೋರನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಆದರೆ ಪೃಥ್ವಿರಾಜ್‌ಗೆ ಸಂಬಂಧಿಸಿದಂತೆ ಶೂಟಿಂಗ್ ಪಾರ್ಟ್ ಬ್ಯಾಲೆನ್ಸ್ ಇದೆಯಂತೆ. ಇದರೊಂದಿಗೆ ಸಲಾರ್ ಸಿನಿಮಾದ ಶೂಟಿಂಗ್ ಮೇಲೆ ಪೃಥ್ವಿರಾಜ್ ಅವಘಡ ಪರಿಣಾಮ ಬೀಳುವ ಸಾಧ್ಯತೆ ಇದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.