Soundarya death reason : ಸೌಂದರ್ಯ... ಹೆಸರಿಗೆ ತಕ್ಕಂತೆ ಸೌಂದರ್ಯದ ಗಣಿ.. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ ಈ ಚೆಲುವೆ ವಿಮಾನ ಅಪಘಾತದಲ್ಲಿ ವಿಧಿವಶರಾದರು. ಚಿತ್ರರಂಗದಲ್ಲಿ ಸೌಂದರ್ಯಾ ಕೆಲಸ ಮಾಡಿದ್ದು ಕೇವಲ ಹನ್ನೆರಡು ವರ್ಷವಾದರೂ, ಅವರ ಸಾಧನೆ ಅಪಾರ..
 
ಎಂದಿನಂತೆ ಅಂದು.. ಬೆಳಗ್ಗೆ ಬೇಗ ಎದ್ದ ಸೌಂದರ್ಯ ತುಂಬಾ ಲವಲವಿಕೆಯಿಂದ ಮನೆ ತುಂಬಾ ಓಡಾಡಿದ್ದರು. ಅತ್ತಿಗೆಯೊಂದಿಗೆ ಮಾತಾಡುತ್ತಲೆ ಒಳ್ಳೆ ಸೀರೆ ಧರಿಸಿ ಹೊರಟ ಸೌಂದರ್ಯ ಬಾಗಿಲ ಬಳಿ ಬಂದು ಮತ್ತೇ ಒಳ ಓಡಿ ಹೋಗುತ್ತಾರೆ.. ಯಾಕೆ ಅಂತ ನೋಡುತ್ತಾ ನಿಂತ ಅಣ್ಣ ಅತ್ತಿಗೆ ಆಶ್ಚರ್ಯದಿಂದ ಏನಾಯ್ತು ಅಂತ ಕೇಳುತ್ತಾರೆ. ಆಗ ಆಕೆ ಹೇಳಿದ್ದು ಕುಂಕುಮ ಹಾಕಿಕೊಳ್ಳಲು ಒಳ ಹೋದೆ ಎನ್ನುತ್ತಾರೆ.. ಅಲ್ಲದೆ, ಖುಷಿಯಿಂದಲೇ ಎರೆಡೆರಡು ಬಾರಿ.. ನಾನು ಹೋಗಿ ಬರುವೆ.. ಅಂತ ಹೇಳಿ ಹೋರಾಡುತ್ತಾರೆ.. 


COMMERCIAL BREAK
SCROLL TO CONTINUE READING

ಇದನ್ನೂ ಓದಿ:ಆ ಸ್ಟಾರ್‌ ಹೀರೋ ನನಗೆ ತಡರಾತ್ರಿ ಕರೆ ಮಾಡಿ... ಚಿತ್ರಹಿಂಸೆ ನೀಡಿದ್ದ..! ಖ್ಯಾತ ನಟನ ಮುಖವಾಡ ಕಳಚಿದ ಕೃತಿ ಶೆಟ್ಟಿ
 
ಆವತ್ತು ಸೌಂದರ್ಯ ಸ್ವಲ್ಪ ವಿಚಿತ್ರವಾಗಿ ವರ್ತಿಸಿದ್ದರು ಅನ್ನೋದು ಅವರನ್ನ ಹತ್ತಿರದಿಂದ ಬಲ್ಲವರ ಮಾತು. ಕುಂಕುಮ ಹಾಕಿಕೊಳ್ಳಲು ಮತ್ತೇ ಒಳ ಹೋಗಿದ್ದು ಇವತ್ತಿಗೂ ಕುಟುಂಬಕ್ಕೆ ಕಾಡೋ ವಿಚಾರವಂತೆ.. ಅಂದಹಾಗೆ.. ಸೌಂದರ್ಯಾ ಭಾರತೀಯ ಚಿತ್ರರಂಗ ಕಂಡ ಅಪರೂಪದ ಪ್ರತಿಭೆ. 1992ರಲ್ಲಿ 'ಗಂಧರ್ವ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಸೌಂದರ್ಯಾ ಎಂಟ್ರಿ ನೀಡಿದರು. ಆನಂತರ ಪರಭಾಷೆಗೂ ಕಾಲಿಟ್ಟರು. ನಂತರ ದಿನಗಳಲ್ಲಿ ಪಂಚಭಾಷಾ ತಾರೆಯಾಗಿ ಖ್ಯಾತಿಯ ಶಿಖರವೇರಿದರು.. 


ಭಾರತೀಯ ಚಿತ್ರರಂಗದಲ್ಲಿ ಸೌಂದರ್ಯಾ ನಟಿಯಾಗಿ ಕೆಲಸ ಮಾಡಿರುವುದು ಕೇವಲ 12 ವರ್ಷ. ವಿಮಾನ ಅಪಘಾತದಲ್ಲಿ ಚಿಕ್ಕ ವಯಸ್ಸಿನಲ್ಲೇ ವಿಧಿವಶರಾದರು. ಚಿತ್ರರಂಗದಲ್ಲಿ ಸೌಂದರ್ಯಾ ಕೆಲಸ ಮಾಡಿದ್ದು ಹನ್ನೆರಡೇ ವರ್ಷವಾದರೂ, ಅವರು ಮಾಡಿರುವ ಸಾಧನೆ ಅಪಾರ.. ಇಂದಿಗೂ ಸೌಂದರ್ಯ.. ಸಿನಿ ಪ್ರೇಕ್ಷಕರ ಮನದಲ್ಲಿ ಸದಾ ಅಮರ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ