Actress Soundarya: ನಟಿ ಸೌಂದರ್ಯ ಸಣ್ಣ ವಯಸ್ಸಿನಲ್ಲಿಯೇ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಛಾಪನ್ನು ಮೂಡಿಸಿದವರು, ತಮ್ಮ ನಟನೆ ಅಷ್ಟೇ ಅಲ್ಲದೆ ನಿಷ್ಕಲ್ಮಶ ನಗೆಯಿಂದಲೇ ಎಲ್ಲರ ಮನ ಸೆಳೆದಂತಹ ನಟಿ ಎಂದರೆ ಅದು ಸೌಂದರ್ಯ ಎಂದರೆ ತಪ್ಪಾಗಲಾರದು. ಇಂತಹ ನಟಿ 2004 ರಲ್ಲಿ ಚಿಕ್ಕ ವಯಸ್ಸಿನಲ್ಲಿ ದುರಂತದ ಸಾವನ್ನು ಕಂಡಿದ್ದು ಎಲ್ಲರನ್ನೂ ದಿಗ್ಬ್ರಾಂತರನ್ನಾಗಿ ಮಾಡಿತ್ತು.


COMMERCIAL BREAK
SCROLL TO CONTINUE READING

1972 ರಲ್ಲಿ ಬೆಂಗಳೂರಿನ ಕನ್ನಡ ಕುಟುಂಬದಲ್ಲಿ ಜನಿಸಿದ ನಟಿ ಸೌಂದರ್ಯಾಳ  ಆರಂಭಿಕ ಬದುಕು ಅಷ್ಟು ಸುಲಭದ್ದಾಗಿರಲಿಲ್ಲ, ಮುಂದೆ ಅವರು ತಮ್ಮ ಪ್ರತಿಭೆ ಮೂಲಕ ಚಂದನವನಕ್ಕೆ ಪ್ರವೇಶಿಸಿ ಕಾಲಾಂತರದಲ್ಲಿ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಬೆಳೆದರು.ಅಷ್ಟೇ ಅವರು ತೆಲುಗಿನ ಬಹುತೇಕ ಟಾಪ್ ನಟರೊಡನೆ ನಟಿಸಿದರು.


ಇದನ್ನೂ ಓದಿ-ʼಈʼ ಕಾರಣಕ್ಕೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಕನ್ನಡ ಸಿನಿರಂಗದಿಂದ ದೂರ ಉಳಿದಿದ್ದು!! ಕನ್ನಡದಲ್ಲಿ ಇವರ ಕೊನೆಯ ಸಿನಿಮಾ ಯಾವುದು ಗೊತ್ತಾ?


ಇದಷ್ಟೇ ಅಲ್ಲದೆ ತೆಲುಗಿನ ಜೊತೆಗೆ ತಮಿಳು, ಮಲಯಾಳಂ ಮುಂತಾದ ದಕ್ಷಿಣ ಭಾರತದ ಎಲ್ಲಾ ಖ್ಯಾತ ಹೀರೋಗಳೊಂದಿಗೆ ಸೌಂದರ್ಯ ನಟಿಸಿದರು. ಬಾಲಿವುಡ್‌ನಲ್ಲಿ ಅಮಿತಾಭ್ ಹಿಂದಿಯಲ್ಲಿ ಸೂರ್ಯ ವಂಶದಲ್ಲಿ ಮೀನಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಲ್ಲಿಯೂ ಕೂಡ ಸಾಕಷ್ಟು ಹೆಸರನ್ನು ಗಳಿಸಿದರು. ಅವರಿಗೆ ಹಿಂದಿಯಲ್ಲಿ ಸಾಕಷ್ಟು ಅವಕಾಶಗಳು ಬಂದರು ಸಹ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬ್ಯುಸಿ ಇದ್ದಿದ್ದರಿಂದಾಗಿ ಅವರು ಪೂರ್ಣ ಪ್ರಮಾಣದಲ್ಲಿ c=ಹಿಂದಿಯಲ್ಲಿ ನಟಿಸಲು ಸಾಧ್ಯವಾಗಲಿಲ್ಲ.


ಇನ್ನೊಂದೆಡೆಗೆ ಚಿತ್ರರಂಗದಲ್ಲಿ ಅವಕಾಶಗಳು ಕ್ಷೀಣಿಸುತ್ತಿರುವಾಗಲೇ ಸೌಂದರ್ಯ  2004 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು.ದುರಾದೃಷ್ಟವಶಾತ್ ಅವರು ತಮ್ಮ ಸಹೋದರ ಅಮರನಾಥ್ ಅವರೊಂದಿಗೆ ಪಕ್ಷದ ಪ್ರಚಾರಕ್ಕೆ ಹೋಗುತ್ತಿದ್ದಾಗ ಹೆಲಿಕಾಪ್ಟರ್ ಅಪಘಾತದಿಂದಾಗಿ ಅಕಾಲಿಕ ಮರಣಕ್ಕೆ ತುತ್ತಾದರು.


ಇದನ್ನೂ ಓದಿ-Shrirasthu Shubhamasthu Serial: ಶ್ರೀರಸ್ತು ಶುಭಮಸ್ತು ಸೀರಿಯಲ್ ಶಾರ್ವರಿ ನಿಜಕ್ಕೂ ಯಾರು? ಇವರ ಬ್ಯಾಕ್‌ಗ್ರೌಂಡ್‌ ಗೊತ್ತಾದ್ರೆ ಶಾಕ್‌ ಆಗ್ತೀರಾ!!


ಕಡಿಮೆ ವಯಸ್ಸಿನಲ್ಲಿಯೇ ಸಾವನ್ನಪ್ಪಿದರೂ ಸಹ ತನ್ನ ನಟನೆ ಮೂಲಕ ಸೌಂದರ್ಯ ಇಂದಿಗೂ ಕೂಡ ಅಭಿಮಾನಿಗಳ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.ಮದುವೆಯಾದ ಒಂದೇ ವರ್ಷದಲ್ಲಿ ದುರಂತ ಸಾವನ್ನನು ಕಂಡ ನಟಿ ಸಾಯುವ ವೇಳೆ ಗರ್ಭಿಣಿಯಾಗಿದ್ದರು ಎನ್ನಲಾಗಿದೆ.ಜೊತೆಗೆ ತಮ್ಮ ನಟನೆಯಿಂದಲೇ ಜನಮನ ಗೆದ್ದಿದ್ದ ನಟಿ ನೂರಾರು ಕೋಟಿ ರೂ ಗಳ ಒಡತಿಯಾಗಿದ್ದರು ಈ ಕುರಿತಾಗಿ ಅವರು ತಮ್ಮ ಆಸ್ತಿಗೆ ಸಂಬಂಧಿಸಿದಂತೆ ವಿಲ್ ಸಹ ಬರೆದಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು, ಈ ವಿಚಾರದಲ್ಲಿ ಸೌಂದರ್ಯಾ ಅವರ ತಾಯಿ ಮತ್ತು ಪತಿ ಇಬ್ಬರೂ ವಿಲ್ ಬರೆದಿದ್ದನ್ನು ಮರೆಮಾಚಿ ಅರ್ಧ ಪಾಲು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಈ ವಿಚಾರದಲ್ಲಿ ಎಷ್ಟರಮಟ್ಟಿಗೆ ಸತ್ಯಾಂಶವಿದೆ ಎಂಬುದು ತಿಳಿದಿಲ್ಲ. ಆದರೆ ಈ ಸುದ್ದಿ ಮಾತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.