Sowjanya Case: 2012ರ ಆಕ್ಟೋಬರ್ 9ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ/ಉಜಿರೆಯಲ್ಲಿ ನಡೆದ  ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಇಂದಿಗೂ ನ್ಯಾಯ ಸಿಕ್ಕಿಲ್ಲ.  ಘಟನೆ ಸಂಬಂಧ ಈಗಾಗಲೇ ರಾಜ್ಯದ 10 ಅಧಿಕ ಮುಖ್ಯ ಸಂಘನೆಗಳು ನ್ಯಾಯಕ್ಕಾಗಿ ಪರಿತಪಿಸುತ್ತಿದೆ.


COMMERCIAL BREAK
SCROLL TO CONTINUE READING

ಘಟನೆ ಸಂಬಂಧ ಇತ್ತಿಚೇಗೆ ರಾಜ್ಯ ಹಲವಡೆ ಧರಣಿ ಮೂಲಕ ಪುನಾರಂಭಿಸಿದ್ದಾರೆ.ಇದೀಗ ನಟ ದುನಿಯಾ ಈ ವಿಷಯ ಸಂಬಂಧ ಮಂಜುನಾಥನ ದರ್ಶನದ ಬಗ್ಗೆಯೂ ಬೇಸರ ವ್ಯಕ್ತ ಪಡಿಸಿದ್ದಾರೆ. 


ನಟ ದುನಿಯಾ ವಿಜಯ್‌,ಪ್ರತಿ ವರ್ಷ ಧರ್ಮಸ್ಥಳದ  ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.


ಇದನ್ನೂ ಓದಿ: ನಾಯಿಯಾದ ಮಾನವ... ಈತ ಪ್ರಾಣಿಯಂತೆ ಕಾಣಲು ಮಾಡಿದ ಖರ್ಚಿಗೆ ಒಂದು ಮನೆ ಕಟ್ಟಬಹುದಿತ್ತು...!


ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು ಎಂದು  ಬುದ್ಧ ತತ್ವಗಳನ್ನು ಹೋಲಿಸಿ ಮಂಜುನಾಥನ ದರ್ಶನದ ಬಗ್ಗೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.


ಅನ್ಯಾಯ ಪರ ಧ್ವನಿ ಎತ್ತುತ್ತಿರುವುದಕ್ಕೆ ಶ್ಲಾಘಿಸಿದ್ದಾರೆ. ಇನ್ನು ಕೆಲವರು ಅವರ ಟ್ವೀಟ್‌ ಗೆ ಕಿಡಿಕಾರಿದ್ಧಾರೆ. ಅದೇನೆ ಇರಲಿ ಅನ್ಯಾಯ ಆದಾಗ ಸ್ಪಂದಿಸುವ ಮನಸ್ಥಿತಿ ಮೊದಲು ಬರಬೇಕು ಇಲ್ಲಿ ಜಾತಿ ಧರ್ಮ ಎಂಬುವುದು ಮುಖ್ಯವಾಗುವುದಿಲ್ಲ. ನ್ಯಾಯ ಅಷ್ಟೆ ಮುಖ್ಯವಾಗಿರುತ್ತದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.