Vijay Raghavendra : ವಿಜಯ್‌ ಕುಟುಂಬ ಇನ್ನು ಸ್ಪಂದನಾ ಸಾವಿನ ಆಘಾತದಿಂದ ಹೊರಬಂದಿಲ್ಲ. ಪತ್ನಿಯ ಅಕಾಲಿಕ ಮರಣ ವಿಜಯ್ ರಾಘವೇಂದ್ರ ಅವರಿಗೆ ತೀರ್ವ ನೋವುಂಟು ಮಾಡಿದೆ. ಇನ್ನು ಈ ದಂಪತಿಗೆ ಈ ದಂಪತಿಗೆ ಶೌರ್ಯ ಎಂಬ ಮಗ ಇದ್ದಾನೆ.


COMMERCIAL BREAK
SCROLL TO CONTINUE READING

ಸ್ಪಂದನಾ ಮೂಲತ ಮಂಗಳೂರಿನ ಬೆಳ್ತಂಗಡಿನವರು. ಸ್ಪಂದನಾ ಅವರ ತಂದೆಗೆ ಸ್ಪಂದನಾ ಎಂದರೆ ಎಲ್ಲಿಲ್ಲದ ಪ್ರೀತಿ. ಪ್ರೀತಿಯಿಂದ ಅವರನ್ನು ಅಚ್ಚು ಎಂದು ಕರೆಯುತಿದ್ದರು. ಅನ್ಯೋನ್ಯವಾಗಿದ್ದ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿದ್ದು ಸ್ಪಂದನಾ ಸಾವು.


ಇದನ್ನೂ ಓದಿ-Vijay Devarkonda : ಮದುವೆ ಕನಸು ಬಿಚ್ಚಿಟ್ಟ ರೌಡಿ ಬಾಯ್‌..!


ಬ್ಯಾಂಕಾಕ್ ಗೆ ಸಂಬಂಧಿಕರ ಜೊತೆ ಪ್ರವಾಸಕ್ಕೆ ಹೋಗಿ, ಅಲ್ಲಿಂದ ರೂಮ್ ಗೆ ಬಂದಾಗ ಸ್ಪಂದನಾ ಅವರು ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಸ್ನೇಹಿತರು ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. 


ಇನ್ನು ಇದೀಗ ಅವರ ಆಸೆಯ ಬಗ್ಗೆ ಮಾಹಿತಿ ಲಭಿಸಿದ್ದು, ಈ ಬಗ್ಗೆ ಸ್ಪಂದನಾ ಅವರು ಸ್ವತಃ ಡೈರಿಯಲ್ಲಿ ಬರೆದಿದ್ದಾರೆ. ಹೌದು ಸಾಮಾಜಿಕ ಜಾಲತಾಣಗಳಲ್ಲಿ ಸ್ಪಂದನಾ ಅವರ ಈಡೇರದ ಆಸೆ ಸುದ್ದಿಯಾಗುತ್ತಿದೆ. ಸ್ಪಂದನಾ ಅವರಿಗೆ ದೊಡ್ಡ ನಿರ್ಮಾಪಕಿ ಆಗಬೇಕು ಎನ್ನುವ ಆಸೆಯಿತ್ತಂತೆ.  ಈ ಬಗ್ಗೆ ಅವರ ಮಾವ ಪೀತಾಂಬರ ಹೇರಾಜೆ ಮಾಹಿತಿ ತಿಳಿಸಿದ್ದಾರೆ. ಅಲ್ಲದೇ ಸ್ಪಂದನಾ ಅವರಿಗೆ ಮಗನನ್ನು ಚಿತ್ರರಂಗಕ್ಕೆ ತರಬೇಕು ಎನ್ನುವುದು ದೊಡ್ಡ ಆಸೆಯಾಗಿತ್ತು. ಈಗ ಅದರ ಹೊಣೆ ವಿಜಯ್ ರಾಘವೇಂದ್ರ ಅವರ ಮೇಲಿದೆ. 


ಇದನ್ನೂ ಓದಿ-ಟ್ರೇಲರ್ ಮೂಲಕ ಗಮನಸೆಳೆದ ಹೊಸಬರ ʻಆರʼ : ಜುಲೈ 28 ರಂದು ಸಿನಿಮಾ ರಿಲೀಸ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.