ಬೆಂಗಳೂರು : 2015ರ ಸೆಪ್ಟೆಂಬರ್ ನಲ್ಲಿ ವಿಚ್ಚೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ನಟ ಕಿಚ್ಚ ಸುದೀಪ್ ದಂಪತಿ ಕೇಸ್ ಹಿಂಪಡೆದಿದ್ದಾರೆ. 


COMMERCIAL BREAK
SCROLL TO CONTINUE READING

2015ರಲ್ಲಿ ಈ ದಂಪತಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ ನಂತರ ಹಲವು ಬಾರಿ ಕೋರ್ಟ್ಗೆ ಹಾಜರಾಗುವಂತೆ ಸೂಚಿಸಿದರೂ ಸುದೀಪ್ ದಂಪತಿ ಹಾಜರಾಗಿರಲಿಲ್ಲ. ಮಗಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಕೇಸ್ ಹಿಂಪಡೆಯಲು ದಂಪತಿಗಳು ನಿರ್ಧರಿಸಿ ಅರ್ಜಿ ಸಲ್ಲಿಸಿದ್ದರು. ಇವರ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದೆ. ಇದರಿಂದ ಸುದೀಪ್-ಪ್ರಿಯಾ ನಡುವಿನ ವೈಮನಸ್ಸು ದೂರವಾಗಿದ್ದು, ಕಿಚ್ಚನ ವೈವಾಹಿಕ ಜೀವನ ಮತ್ತೆ ಬೆಸೆದಿದೆ.