ನವದೆಹಲಿ: ತಮಿಳು ಸೂಪರ್ ಸ್ಟಾರ್ ಅಜಿತ್ ಅವರ ಬಹು ನಿರೀಕ್ಷಿತ ಚಿತ್ರ ವಿಶ್ವಾಸಂನ ಕಟೌಟ್ ಬಿದ್ದು ಐವರು ಅಭಿಮಾನಿಗಳು ಗಾಯಗೊಂಡ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಕಟೌಟ್ ಗೆ ಹಾಲಿನ ಅಭಿಷೇಕ ಹಾಗೂ ಮಾಲಾರ್ಪಣೆ ಮಾಡುವ ಸಂದರ್ಭದಲ್ಲಿ ಏಕಾಏಕಿ ಕಟೌಟ್ ಅಭಿಮಾನಿಗಳ ಮೇಲೆ ಬಿದ್ದಿದೆ ಇದರಿಂದ  ಅದರ ಕೆಳಗೆ ಸಿಕ್ಕು ಅಭಿಮಾನಿಗಳಿಗೆ ಗಾಯಗಳಾಗಿವೆ. ಕಟೌಟ್ ಬೀಳುತ್ತಿರುವ ವಿಡೀಯೋವನ್ನು ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು ಅದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.



ಇಂದು ತಮಿಳಿನಲ್ಲಿ ಬಹು ನಿರೀಕ್ಷಿತ  ಚಿತ್ರಗಳಾದ ವಿಶ್ವಾಸಂ ರಜನಿಕಾಂತ್ ಅವರ ಪೆಟ್ಟಾ ಸಿನಿಮಾ ಬಿಡುಗಡೆಯಾಗುತ್ತಿವೆ.ವಿಶ್ವಾಸಂ ಚಿತ್ರವನ್ನು  ಶಿವಕುಮಾರ್ ಅಕಾ ಸಿವಾ ನಿರ್ದೇಶಿಸಿದ್ದು ಈ ಚಿತ್ರದಲ್ಲಿ ಅಜಿತ್ ದ್ವೀ ಪಾತ್ರದಲ್ಲಿ ನಟಿಸಿದ್ದಾರೆ.ಇನ್ನು ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.


ವಿಶೇಷವೆಂದರೆ ಅಜಿತ್ ಮತ್ತು ನಿರ್ದೇಶಕ ಶಿವಕುಮಾರ್ ಅವರ ಕಾಂಬಿನೇಶನ್ ನಲ್ಲಿ 'ವಿ' ಅಕ್ಷರದಲ್ಲಿ ಬರುತ್ತಿರುವ ನಾಲ್ಕನೇ ಸಿನಿಮಾ ಇದಾಗಿದ್ದು, ಈ ಹಿಂದೆ ವೀರಮ್,ವೇದಾಲಂ, ವಿವೇಗಂ ಚಿತ್ರಗಳು ಕೂಡ ಸಾಕಷ್ಟು ಸದ್ದು ಮಾಡಿದ್ದವು.