ನವದೆಹಲಿ: ಖ್ಯಾತ ಸೂಪರ್ ಸ್ಟಾರ್ ರಜನಿಕಾಂತ್ ಕುರಿತು ಅಭಿಮಾನಿಗಳಲ್ಲಿರುವ ಪ್ರೀತಿ ಶಬ್ದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಆದರೆ, ಸ್ವತಃ ರಜನಿಕಾಂತ್ ಅವರೇ ತಮ್ಮ ಕುರಿತು ಟಿಪ್ಪಣಿ ಮಾಡುವುದರಿಂದ ಹಿಂದೆಸರಿಯುವುದಿಲ್ಲ. ಇತ್ತೀಚೆಗಷ್ಟೇ ರಜನಿ ಅಭಿನಯದ ಅವರ ಮುಂಬರುವ ಚಿತ್ರ 'ದರ್ಬಾರ್'ನ ಟ್ರೈಲರ್ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ರಜನಿ ಅವರು ತಮ್ಮ ಅಭಿನಯದ ಕುರಿತು ಕಡಕ್ ಟಿಪ್ಪಣಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಟ್ರೈಲರ್ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿರುವ ಥಲೈವಾ, ತಾವು ತಮ್ಮ ಅಭಿನಯದಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ ಎಂದಿದ್ದಾರೆ. ಜೊತೆಗೆ ನೀವು ಎಷ್ಟು ಹೆಚ್ಚು ಕೆಲಸ ಮಾಡುವಿರೋ, ನಿಮ್ಮಲ್ಲಿ ಅಷ್ಟೇ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದಿದ್ದಾರೆ.



ಟ್ರೈಲರ್ ಬಿಡುಗಡೆ ಬಳಿಕ ಮಾತನಾಡಿರುವ ಈ ಸೂಪರ್ ಸ್ಟಾರ್ "ನಾನು ನನ್ನ ಅಭಿನಯದಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ. ಪ್ರತಿಯೊಬ್ಬರೂ ತಮ್ಮ ಕರಿಯರ್ ಆರಂಭದಲ್ಲಿ ಭಯಪಡುತ್ತಾರೆ ಹಾಗೂ ನಾಚಿಕೊಳ್ಳುತ್ತಾರೆ. ಆದರೆ, ನೀವು ನಿಮ್ಮ ಕೆಲಸದಲ್ಲಿ ಪ್ರಗತಿ ಸಾಧಿಸುತ್ತಾ ಹೋದಂತೆ, ಅದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಳಕ್ಕೆ ಕಾರಣವಾಗುತ್ತದೆ. ನನ್ನ ಪ್ರಕಾರ ಅಭಿನಯ ಪ್ರಮುಖವಾಗಿ ನಿರ್ದೇಶಕ ಹಾಗೂ ಅವರು ಹೇಗೆ ಓರ್ವ ಕಲಾವಿದನ ಕಲೆಯನ್ನು ಉಪಯೋಗಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಆಧಾರಿತವಾಗಿದೆ" ಎಂದಿದ್ದಾರೆ.



ಈ ಸಂದರ್ಭದಲ್ಲಿ ಚಿತ್ರದಲ್ಲಿ ರಜನಿ ಜೊತೆ ನಟಿಸಿರುವ ಸಹಕಲಾವಿದರಾದ ಸುನೀಲ್ ಶೆಟ್ಟಿ, ಪ್ರತೀಕ್ ಬಬ್ಬರ್ ಉಪಸ್ಥಿತರಿದ್ದರು. ಅಷ್ಟೇ ಅಲ್ಲ ಚಿತ್ರ ನಿರ್ದೇಶಕ ಎ.ಆರ್. ಮುರುಗದೊಸ್, ಛಾಯಾಗ್ರಾಹಕ ಸಂತೋಷ್ ಸಿವನ್, ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಹಾಗೂ ಗಾಯಕ ಅರಮಾನ್ ಮಲಿಕ್ ಕೂಡ ರಜನಿಗೆ ಸಾಥ್ ನೀಡಿದ್ದಾರೆ.