ಬೆಂಗಳೂರು: ನಟ ದುನಿಯಾ ವಿಜಯ್ ಜಿಮ್ ಟ್ರೈನರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡುವುದರ ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಅವರನ್ನು ಈಗ ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ಬಂಧಿಸಿದ್ದಾರೆ. 


COMMERCIAL BREAK
SCROLL TO CONTINUE READING

ಶನಿವಾರದಂದು ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ ದೇಹದಾರ್ಢ್ಯ ಸ್ಪರ್ಧೆ ನೋಡಲು ಬಂದಿದ್ದ ದುನಿಯಾ ವಿಜಯ್ ಅವರು ಹಳೆಯ ದ್ವೇಷದ ಹಿನ್ನಲೆಯಲ್ಲಿ  ಜಿಮ್ ತರಬೇತಿದಾರ ಮಾರುತಿ ಗೌಡನನ್ನು ಕಿಡ್ನಾಪ್ ಮಾಡಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. 


ಸ್ಯಾಂಡಲ್ ವುಡ್ ನ ಹಲವು ನಟರಿಗೆ ಅದರಲ್ಲೂ ಯಶ್ ಮತ್ತು ಅಜಯ್ ರಾವ್ ಅವರಿಗೆ ಜಿಮ್ ತರಬೇತಿದಾರರಾಗಿರುವ ಮಾರುತಿಗೌಡರನ್ನು ಕಾರಿನಲ್ಲಿ ಕುಂದಿರಿಸಿ ಅಲ್ಲೇ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.ಈ ಕುರಿತಾಗಿ ಪಾನಿಪುರಿ ಕಿಟ್ಟಿಯವರು ನಗರದ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಹೈಗ್ರೌಂಡ್ ಪೊಲೀಸರು ದುನಿಯಾ ವಿಜಯ್ ಕರೆ ಮಾಡಿ ಪೋಲಿಸ್ ಠಾಣೆಗೆ ಹಾಜರಾಗಲು ತಿಳಿಸಿದ್ದಾರೆ. ಠಾಣೆಗೆ ಬಂದ ನಂತರವೋ ಸುಮ್ಮನಿರದ ದುನಿಯಾ ವಿಜಯ ಮತ್ತೆ ಅಲ್ಲಿ ಗುಂಡಾಗಿರಿಯ ವರ್ತನೆ ತೋರಿ ಪಾನಿ ಪುಟ್ಟಿ ಕಡೆಯವರಿಗೆ ಕೂಗಾಡಿದ್ದಾರೆ. ಈಗ ಹೈಗ್ರೌಂಡ್ ಪೊಲೀಸರು ದುನಿಯಾ ವಿಜಯ್ ಮೇಲೆ ಮಾರಣಾಂತಿಕ ಹಲ್ಲೆ ಮತ್ತು ಕೊಲೆ ಆರೋಪದಡಿ  ಪ್ರಕರಣವನ್ನು ದಾಖಲಿಸಿದ್ದಾರೆ.
.