ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ನಟಿ ಟಬು, ನೀಲಮ್ ಮತ್ತು ಸೋನಾಲಿ ಬೇಂದ್ರೆ 20 ವರ್ಷದ ಕೃಷ್ಣಮೃಗ ಬೇಟೆ ಪ್ರಕರಣದ ಅಂತಿಮ ತೀರ್ಪು ಇಂದು(ಗುರುವಾರ) ಹೊರಬೀಳಲಿದೆ. ಜೋಧಪುರ ಕೋರ್ಟ್ ಈ ಸ್ಟಾರ್ ಗಳ ಭವಿಷ್ಯವನ್ನು ಇಂದು ನಿರ್ಧರಿಸಲಿದೆ. 


COMMERCIAL BREAK
SCROLL TO CONTINUE READING

'ಹಮ್ ಸಾಥ್ ಸಾಥ್ ಹೈ' ಚಿತ್ರದ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಟಬು, ನೀಲಂ, ಸೋನಾಲಿ ಬೆಂದ್ರೆ ಮತ್ತು ಜೋಧ್ಪುರ್ ನಿವಾಸಿ ದುಶ್ಯಾಂತ್ ಸಿಂಗ್ ಅವರು 1998 ರ ಅಕ್ಟೋಬರ್ 1 ರಂದು ಜೋಧ್ಪುರದಲ್ಲಿ ಲುನಿ ಪೊಲೀಸ್ ಠಾಣೆಯ ಕಂಕನಿ ಗ್ರಾಮದಲ್ಲಿ ಎರಡು ಕೃಷ್ಣಮೃಗ ಬೇಟೆಯಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಾಲಿವುಡ್ ಸ್ಟಾರ್ ಗಳು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂದೂ ಸಹ ಹೇಳಲಾಗಿದೆ. ಈ ಬಗ್ಗೆ 2017ರ ಸೆಪ್ಟಂಬರ್ 13ರಂದು ಅಂತಿಮ ಹಂತದ ವಿಚಾರಣೆ ನಡೆಸಿದ್ದ ಜೋಧಪುರ ಹೈಕೋರ್ಟ್ ಇಂದು ತೀರ್ಪು ಪ್ರಕಟಿಸಲಿದೆ.