ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಒಡೆಯ' ತೆರೆಕಂಡಿದ್ದು, ಹಲವೆಡೆ ಬೆಳಗಿನ ಜಾವದಿಂದಲೇ ವಿಶೇಷ ಪ್ರದರ್ಶನ ಆರಂಭವಾಗಿವೆ. 'ಯಜಮಾನ', 'ಕುರುಕ್ಷೇತ್ರ', 'ಅಮರ್' ಚಿತ್ರಗಳಲ್ಲಿ ದರ್ಶನ್ ಕಣ್ತುಂಬಿಕೊಂಡಿದ್ದ ಅಭಿಮಾನಿಗಳು ವರ್ಷದ ಕೊನೆಯಲ್ಲಿ ಬಿಡುಗಡೆಗೊಳ್ಳುತ್ತಿರುವ  'ಒಡೆಯ'ನನ್ನು ಪಟಾಕಿ ಸಿಡಿಸಿ, ಸಿಹಿ ಹಂಚುವುದರ ಮೂಲಕ ಬರಮಾಡಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಒಡೆಯ' ಸಿನಿಮಾದ ಟ್ರೇಲರ್ ರಿಲೀಸ್ ಆದ 1 ಗಂಟೆಯ ಒಳಗೆ ನಾಲ್ಕು ಲಕ್ಷ ಜನ ವೀಕ್ಷಿಸಿ ದಾಖಲೆ ಬರೆದಿದ್ದರು. ಆರಂಭದಿಂದಲೂ ಭಾರೀ ನಿರೀಕ್ಷೆ ಮೂಡಿಸಿದ್ದ 'ಒಡೆಯ' ಡೈಲಾಗ್, ಹಾಡು, ಫೈಟ್ ಅಭಿಮಾನಿಗಳ ಮನಗೆದ್ದಿದ್ದು,  ಮೊದಲ ದಿನವೇ ಗ್ರಾಂಡ್ ಓಪನಿಂಗ್ ಪಡೆದುಕೊಂಡಿದೆ. 


ಸಂದೇಶ್ ಕಂಬೈನ್ಸ್ ಬ್ಯಾನರ್ ಅಲ್ಲಿ ಮೂಡಿಬಂದಿರುವ ‘ಒಡೆಯ’ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಸಿಕೊಳ್ಳುವ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯಿಸಿರುವ ಈ ಚಿತ್ರ ಪಕ್ಕಾ ಮಾಸ್ ಚಿತ್ರ ಎನ್ನುವುದನ್ನು ಈಗಾಗಲೇ ಟ್ರೈಲರ್ ಸಾಬೀತು ಪಡಿಸಿದೆ. ದರ್ಶನ್ ಜೊತೆಗೆ ಚಿತ್ರದಲ್ಲಿ ನಟಿ ಸನಾಹ ತಿಮ್ಮಯ್ಯ, ದೇವರಾಜ್, ರವಿಶಂಕರ್, ಶರತ್ ಲೋಹಿತಾಶ್ವ, ಚಿತ್ರಾ ಶೆಣೈ ಕಾಣಿಸಿಕೊಂಡಿದ್ದಾರೆ.


ಇನ್ನು ಈ ಚಿತ್ರದಲ್ಲಿ ಸಾಧುಕೋಕಿಲಾ, ಚಿಕ್ಕಣ್ಣ, ತಬಲ ನಾಣಿ ಅವರೂ ಕಾಣಿಸಿಕೊಂಡಿದ್ದು ಭರಪೂರ ಮನರಂಜನೆಗೆ ಕೊರತೆಯಿಲ್ಲ ಎಂದು ಹೇಳಲಾಗುತ್ತಿದೆ.