ಬೆಂಗಳೂರು : ಕನ್ನಡದ ದಿ ಡಿವೈನ್‌ ಬ್ಲಾಕ್‌ಬ್ಲಸ್ಟರ್‌ ಸಿನಿಮಾ ಕಾಂತಾರಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಟಾರ್‌ ನಟರು, ನಿರ್ದೇಶಕರು, ರಾಜಕೀಯ ಗಣ್ಯರು ರಿಷಬ್‌ ಶೆಟ್ಟಿ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಇದೀಗ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರು ‘ಕಾಂತಾರ’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಕುರಿತ ವಿಡಿಯೋ ಒಂದನ್ನು ತಮ್ಮ ಟ್ಟಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ದೇಶಾದ್ಯಂತ ಕಾಂತಾರ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕಾಂತಾರದ ಅಬ್ಬರಕ್ಕೆ ಜನ ಫಿದಾ ಆಗಿದ್ದಾರೆ. ಸದ್ಯ ರಿಷಬ್‌ ಶೆಟ್ಟಿ ಸಿನಿಮಾವನ್ನು ನೋಡಿರುವ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ, ಜಸ್ಟ್‌ ಕಾಂತಾರ ಸಿನಿಮಾ ನೋಡಿ ಹೊರ ಬಂದೆ. ನನ್ನ ಅನುಭವವ ನಿಮ್ಮೊಂದಿಗೆ ಹಂಚಿಕೊಳ್ಳಲೆಬೇಕು. ವಾಹ್‌ ಎಂತಹ ಅದ್ಭುತ ಸಿನಿಮಾ ಕಾಂತಾರ, ಇಂತಹ ಸಿನಿಮಾವನ್ನು ನಾನು ಈವರೆಗೆ ನೋಡಿಲ್ಲ. ಹ್ಯಾಟ್ಸ್‌ ಆಫ್‌ ರಿಷಬ್‌ ಶೆಟ್ಟಿ. ನಿರ್ದೇಶಕರಾಗಿ ಉತ್ತಮ ಕೆಲಸ ಮಾಡಿದ್ದೀರಿ.


ಇದನ್ನೂ ಓದಿ: Puneeth Parva : ʼಕನ್ನಡ ಇರೋವರೆಗೂ ಕನ್ನಡಾಭಿಮಾನಿಗಳ ಹೃದಯದಲ್ಲಿ ಅಪ್ಪು ಅಮರʼ


ಕಾಂತಾರ ಒಂದು ರೀತಿಯ ಕಾದಂಬರಿ ಅನುಭವ ನೀಡಿತು. ವಿಶೇಷವಾಗಿ ಕ್ಲೈಮ್ಯಾಕ್ಸ್‌ ಅಂತೂ ಸೂಪರ್‌, ಸಿನಿಮಾದಲ್ಲಿ ಜಾನಪದ ಕಲೆಯ ಬಗ್ಗೆ ಅಚ್ಚುಕಟ್ಟಾಗಿ ಹೇಳಿದ್ದಾರೆ. ಈ ಸಿನಿಮಾವನ್ನು ತಪ್ಪದೇ ಎಲ್ಲರೂ ನೋಡಿ. ದಿಪಾವಳಿ ಮುಗಿದ ನಂತರ ಚಿತ್ರಮಂದಿರಕ್ಕೆ ಬಂದು ಆದಷ್ಟೂ ಎಲ್ಲರೂ ನೋಡಲೆಬೇಕು ಎಂದು ಹೇಳಿರುವ ವಿಡಿಯೋವನ್ನು ವಿವೇಕ್‌ ಅವರು ತಮ್ಮ ಟ್ಟಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ರಿಷಬ್‌ ಶೆಟ್ಟಿ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ ಕಾಂತಾರ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆ. ಸಿನಿಮಾದಲ್ಲಿ ರಿಷಬ್‌ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ಇನ್ನು ಕಾಂತಾರ ಸಿನಿಮಾ ಈವರೆಗೆ ₹170 ಕೋಟಿ ಗಳಿಕೆ ಕಂಡಿದೆ ಎಂದು ಹೇಳಲಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ