ಚೆನ್ನೈ : ದಿಟ್ಟ ಪಾತ್ರಗಳಿಗೆ ಹೆಸರುವಾಸಿಯಾದ ನಟಿ ವರಲಕ್ಷ್ಮಿ ಶರತ್‌ಕುಮಾರ್, ಸಾಮಾನ್ಯವಾಗಿ ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯಗಳನ್ನೂ ಹಂಚಿಕೊಳ್ಳಲು ಎಂದಿಗೂ ಹಿಂದೆ ಸರಿಯುವುದಿಲ್ಲ.ಈಗ ಅವರು ತಮ್ಮ ಮತ್ತೊಂದು ಹೇಳಿಕೆಯಿಂದಾಗಿ ಎಲ್ಲರನ್ನು ಒಂದು ಕ್ಷಣ ದಂಗು ಬಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಈಗ ಅವರು  ಜೀವನದಲ್ಲಿ ಯಾರನ್ನು ತಾವು ಮದುವೆಯಾಗಲು ಹೋಗುವುದಿಲ್ಲ, ಮದುವೆ ಎನ್ನುವ ಸಂಸ್ಥೆಯಲ್ಲಿ ತಮಗೆ ನಂಬಿಕೆ ಇಲ್ಲ ಎಂದು ಹೇಳಿದರು. ಇತ್ತೀಚೆಗೆ, ತಮ್ಮ ಮುಂಬರುವ ಚಿತ್ರ ಕಣ್ಣಿರಾಸಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ  "ಸಾಮಾನ್ಯವಾಗಿ, ನಾನು ಚೊಚ್ಚಲ ಚಲನಚಿತ್ರ ನಿರ್ಮಾಪಕರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಕನ್ನೀರಸಿಯ ಚಿತ್ರಕಥೆಯನ್ನು ಓದುವಾಗ ನಾನು ಸಂಪೂರ್ಣವಾಗಿ ನಕ್ಕಿದ್ದೇನೆ ಮತ್ತು ತಕ್ಷಣವೇ ನನ್ನ ಒಪ್ಪಿಗೆ ನೀಡಿದೆ. ಈ ಚಿತ್ರವು ಪ್ರೇಮ ವಿವಾಹದ ಮಹತ್ವವನ್ನು ಎತ್ತಿ ತೋರಿಸಿದರೂ, ನಿಜ ಜೀವನದಲ್ಲಿ ತಾವು ಯಾರನ್ನು ಮದುವೆಯಾಗುವುದಿಲ್ಲ. ಮದುವೆಯ ಸಂಸ್ಥೆಯಲ್ಲಿ ತಮಗೆ ನಂಬಿಕೆ ಇಲ್ಲ ಎಂದು ಹೇಳಿದರು.


ಈ ಹಿಂದೆ ಹಲವಾರು ವರ್ಷಗಳಿಂದ ವರಲಕ್ಷ್ಮಿ ಶರತ್ ಕುಮಾರ್ ಹಾಗೂ ವಿಶಾಲ್ ನಡುವೆ ಸಂಬಂಧವಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು, ಆದರೆ ಯಾವಾಗಾ ಅನಿಷಾ ಜೊತೆ ವಿಶಾಲ್ ಎಂಗೇಜ್ ಮೆಂಟ್ ಮಾಡಿಕೊಂಡರೋ ಆಗ ಇದಕ್ಕೆ ತೆರೆಬಿದ್ದಿತು. ನವೆಂಬರ್ 2018 ರಲ್ಲಿ, ವರಲಕ್ಷ್ಮಿ ಈ ವಿಚಾರವಾಗಿ ಮಾತನಾಡುತ್ತಾ 'ನಾವು ತುಂಬಾ ಆಪ್ತರು. ನಾವು ವಿಷಯಗಳನ್ನು ಹಂಚಿಕೊಳ್ಳುತ್ತೇವೆ. ಆದರೆ ನಮ್ಮ ಸಂಬಂಧದ ವರದಿಗಳೆಲ್ಲವೂ ಸುಳ್ಳು. ವಾಸ್ತವವಾಗಿ, ವಿಶಾಲ್ ಮದುವೆಗೆ ಮುಂದಾಗಿದ್ದರೆ, ನಾನು ಅವನಿಗೆ ಸೂಕ್ತ ವಧುವನ್ನು ಹುಡುಕಲು ಸಿದ್ಧನಿದ್ದೇನೆ. ಅವನು ಮದುವೆಯಾದರೆ ನನಗೆ ಸಂತೋಷ್, ಎಲ್ಲರೂ ನಮ್ಮ ಬಗ್ಗೆ ಏಕೆ ಸುಳ್ಳು ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದರು.