ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಇಹಲೋಕ ತ್ಯಜಿಸಿ ಒಂದು ವರ್ಷದ ಬಳಿಕ, ಜಯಾ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಹೇಗಿದ್ದರು ಎಂಬ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಈ ಹಿಂದೆ ಜಯಲಲಿತಾ ಪ್ರತಿನಿಧಿಸುತ್ತಿದ್ದ ಆರ್.ಕೆ. ನಗರ ಕ್ಷೇತ್ರದ ಚುನಾವಣೆ ನಾಳೆ ಇರುವ ಹಿನ್ನೆಲೆಯಲ್ಲಿ ಟಿಟಿವಿ ದಿನಕರನ್ ಬಣ ಈ ವಿಡಿಯೋ ಬಿಡುಗಡೆ ಮಾಡಿದೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆದ ಕಾರಣ ದಿನಕರನ್ ಬಣಕ್ಕೆ ಚುನಾವಣಾ ಆಯೋಗದ ನೋಟಿಸ್ ಜಾರಿ ಮಾಡಿದೆ.


COMMERCIAL BREAK
SCROLL TO CONTINUE READING

ಅಷ್ಟೇ ಅಲ್ಲದೆ ದಿನಕರನ್ ಬಣದ ಈ ನೀತಿಯನ್ನು ತಮಿಳುನಾಡಿನ ಅನೇಕ ರಾಜಕೀಯ ನಾಯಕರೂ ಸಹ ಖಂಡಿಸಿದ್ದಾರೆ.