Mahesh babu on Vamshi Paidipally : ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಸೌಮ್ಯ ಸ್ವಭಾವದವರು.. ಆದ್ರೆ ಯಾರಾದರು ಕೆರಳಿಸಿದರೆ ಅವರ ಮಾತಿನ ದಾಟಿಗೆ ಬಲಿಯಾಗಬೇಕಾಗುತ್ತದೆ.. ಅದರಲ್ಲೂ ಅವರ ಮೇಲೆ ವ್ಯಂಗ್ಯದ ಮಾತುಗಳನ್ನಾಡಿದರೆ ಸುಮ್ಮನೆ ಇರುವುದಿಲ್ಲ.. ಸರಿಯಾದ ಉತ್ತರ ನೀಡುತ್ತಾರೆ.. ಈ ಹಿನ್ನೆಲೆಯಲ್ಲಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ನಟ ಸಿನಿಮಾವೊಂದರ ಶೂಟಿಂಗ್ ವೇಳೆ ನಡೆದ ಘಟನೆಯನ್ನು ಬಹಿರಂಗಪಡಿಸಿ ಹಾಸ್ಯ ಚಟಾಕಿ ಹಾರಿಸಿದರು..


COMMERCIAL BREAK
SCROLL TO CONTINUE READING

ಅಸಲಿ ವಿಷಯಕ್ಕೆ ಹೋದರೆ ʼಮಹರ್ಷಿʼ ಚಿತ್ರದ ಸಂದರ್ಭದಲ್ಲಿ ನಡೆದ ಘಟನೆ ಇದು. ಶೂಟಿಂಗ್ ಮಾಡುವಾಗ ಟ್ರಾಲಿ ಬಂದು ನಿಲ್ಲಬೇಕು. ಆಗ ಸರಿಯಾಗಿ ಮಹೇಶ್‌ ಬಾಬು ಕಣ್ಣಲ್ಲಿ ನೀರು ಬರಬೇಕು... ಅದಕ್ಕೆ ನಟ ನಾನು ಮಹಾನ್ ನಟಿ ಸಾವಿತ್ರಿ ಎಂದು ನೀವು ಭಾವಿಸುತ್ತೀರಾ? ಯಾವಾಗ ಬೇಕಾದರೂ ಕಣ್ಣೀರು ಬರಿಸೋಕೆ ಅಂತ ಡೈರೆಕ್ಟರ್‌ಗೆ ಅಂದೆ... ಕೊನೆಗೆ ಪ್ರಯತ್ನಪಟ್ಟೆ ನಿಜವಾಗಿಯೂ ಕಣ್ಣೀರು ಬಂತು ಅಂತ ಮಹೇಶ್ ಬಾಬು ಹೇಳಿಕೊಂಡಿದ್ದಾರೆ. 


ಇದನ್ನೂ ಓದಿ:'ಡಬಲ್ ಇಸ್ಮಾರ್ಟ್' 3ನೇ ಹಾಡು ರಿಲೀಸ್..! 'ಕ್ಯಾ ಲಫ್ಡಾ' ಅಂತಾ ಹೆಜ್ಜೆ ಹಾಕಿದ ರಾಮ್-ಕಾವ್ಯಾ 


ಮಹೇಶ್ ಬಾಬು ಅಭಿನಯದ ಮಹರ್ಷಿ ಚಿತ್ರವನ್ನು ವಂಶಿ ಪೈಡಿಪಲ್ಲಿ ನಿರ್ದೇಶಿಸಿದ್ದಾರೆ. 2019 ರಲ್ಲಿ ಬಿಡುಗಡೆಯಾದ ಈ ಚಿತ್ರ ಉತ್ತಮ ಪ್ರದರ್ಶನ ಕಂಡಿತು. ಈ ಸಿನಿಮಾದ ರಿಲೀಸ್ ಪ್ರಚಾರದ ವೇಳೆ ಮಹೇಶ್ ಬಾಬು ಈ ವಿಷಯವನ್ನು ಹಂಚಿಕೊಂಡಿದ್ದಾರೆ.. ಸದ್ಯ ನಟನ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.