Vinay Rajkumar Had North Karnataka Meal At Hubbali: ಸ್ಯಾಂಡಲ್‌ವುಡ್‌ನ ದೊಡ್ಮನೆಯ ಕುಡಿ ನಟ ವಿನಯ್ ರಾಜಕುಮಾರ್ ಸದ್ಯ ತಮ್ಮ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ನಿರ್ದೇಶಕ ಸಿಂಪಲ್ ಸುನಿ ಡೈರೆಕ್ಟ್ ಮಾಡಿರೋ ಒಂದು ಸರಳ ಪ್ರೇಮ ಕಥೆ ಚಿತ್ರದ ಪ್ರಚಾರವನ್ನ ಎಲ್ಲೆಡೆ ಮಾಡುತ್ತಿದ್ದಾರೆ. ಸಿನಿಮಾದ ಪ್ರಚಾರದ ವೇಳೆ  ಹುಬ್ಬಳ್ಳಿಗೂ ಚಿತ್ರತಂಡದ ಜೊತೆಗೆ ಬಂದ ವಿನಯ್‌, ಶ್ರೀ ಸಿದ್ಧಾರೂಢ ಮಠಕ್ಕೂ ಭೇಟಿಕೊಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಬಳಿಕ ವಿನಯ್‌ ರಾಜ್‌ಕುಮಾರ್‌ ಚೆನ್ನಮ್ಮ ಸರ್ಕಲ್‌ನ ಕಿತ್ತೂರು ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ  ಮಾಡಿ, ಸಂಗೊಳ್ಳಿ ರಾಯಣ್ಣ ಪುತ್ಥಳಿಗೂ ಹೂವಿನ ಮಾಲೆಯನ್ನ ಹಾಕಿದ್ದಾರೆ. ಈ ರೀತಿ ಇಡೀ ದಿನ ಹುಬ್ಬಳ್ಳಿಯ ಪ್ರಮುಖ ಜಾಗದಲ್ಲಿ ಓಡಾಡಿದ ಅಣ್ಣವರ ಮೊಮ್ಮಗ, ಮಧ್ಯಾಹ್ನದ ಹೊತ್ತಿಗೆ ಇಲ್ಲಿಯ ಪ್ರೆಸ್‌ಕ್ಲಬ್ ಪಕ್ಕದ ಶ್ರೀ ಬಸವೇಶ್ವರ ಖಾನಾವಳಿಯಲ್ಲಿ ಊಟ ಮಾಡಿದ್ದಾರೆ.


ಇದನ್ನೂ ಓದಿ: Padma Awards 2024: ಗಣರಾಜ್ಯೋತ್ಸವದಂದು ಮೆಗಾಸ್ಟಾರ್‌ಗೆ ಲಭಿಸಿತು ಪದ್ಮವಿಭೂಷಣ ಪ್ರಶಸ್ತಿ!


ಹುಬ್ಬಳ್ಳಿ ಜೊತೆಗೆ ದೊಡ್ಮನೆಯಗೆ  ನಂಟು ಇದ್ದೇ ಇದೆ. ಡಾ. ರಾಜ್‌ಕುಮಾರ್‌ ಗುಬ್ಬಿ ವೀರಣ್ಣ ನಾಟಕ ಕಂಪನಿ ಕಾಲದಿಂದಲೂ ಹುಬ್ಬಳ್ಳಿಗೆ ಬಂದು ಹೋಗಿದ್ದು, ಇವರ ಈ ಒಂದು ನಂಟಿನಿಂದಲೇ ಇಡೀ ಕುಟುಂಬ ಆಗಾಗ ಹುಬ್ಬಳ್ಳಿಗೆ ಬಂದು ಶ್ರೀ ಸಿದ್ಧಾರೂಢರ ದರ್ಶನ ಪಡೆದು ಅಲ್ಲಿಯ ಊಟ ಸವಿಯದೇ ಹೋಗೋದಿಲ್ಲ. ಈ ಒಂದು ಪದ್ಧತಿಯನ್ನ ವಿನಯ್ ರಾಜಕುಮಾರ್ ಕೂಡ ಫಾಲೋ ಮಾಡಿದ್ದಾರೆ. 


ವಿನಯ್‌ ರಾಜ್‌ಕುಮಾರ್‌ ಹುಬ್ಬಳ್ಳಿಯ ಬಸವೇಶ್ವರ ಖಾನಾವಳಿಯಲ್ಲಿಉತ್ತರ ಕರ್ನಾಟಕದ ಶೈಲಿ ಊಟವನ್ನು ಮಾಡಿ ಖುಷಿಪಟ್ಟು, ಮತ್ತೆ ಮತ್ತೆ ಈಕಡೆಗೆ ಬಂದಾಗ ಈ ಊಟ ನೆನಪಿಗೆ ಬರುತ್ತದೆ ಅಂತಲೂ ಹೇಳಿದ್ದಾರೆ. ಒಂದು ಸರಳ ಪ್ರೇಮ ಕಥೆ ಚಿತ್ರದ ಪ್ರಚಾರಕ್ಕೆ ಬಂದ ವಿನಯ್, ಹುಬ್ಬಳ್ಳಿಯಲ್ಲಿ ಹೋಳಿಗೆ  ತಿಂದು, ಆ ಒಂದು ಸವಿಯೊಂದಿಗೆ ಅಜ್ಜಿ ಪಾರ್ವತಮ್ಮನವರನ್ನೂ ನೆನಪಿಸಿಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.