ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅವರ 67ನೇ ಹುಟ್ಟು ಹಬ್ಬವನ್ನು ಇಂದು ಅಭಿಮಾನ್ ಸ್ಟುಡಿಯೋದಲ್ಲಿ ಆಚರಿಸಲಾಗುತ್ತಿದೆ. ಮತ್ತೊಂದೆಡೆ ಸ್ಮಾರಕದ ವಿಚಾರವಾಗಿ ಬೇಸರಗೊಂಡಿರುವ ವಿಷ್ಣು ಕುಟುಂಬ ಕಳೆದ ಬಾರಿ ಅಭಿಮಾನ್ ಸ್ಟುಡಿಯೋಗೆ ಬಂದಿರಲಿಲ್ಲ, ಈ ಬಾರಿಯೂ ಬರುತ್ತಿಲ್ಲ ಎಂದು ವಿಷ್ಣು ಅಳಿಯ ಅನಿರುದ್ಧ್ ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ವಿಭಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ಆಯೋಜನೆ ಆಗಿದೆ. 
ಹುಟ್ಟು ಹಬ್ಬದ ಪ್ರಯುಕ್ತ ವಿಷ್ಣು ಅಳಿಯ ಅನಿರುದ್ಧ್ ಅಭಿನಯದ ರಾಜಸಿಂಹ ಚಿತ್ರದ ಟೀಸರ್ ಬಿಡುಗಡೆ ವಿಷ್ಣು ನಿವಾಸದಲ್ಲಿ ನೆರವೇರಲಿದೆ.


ವಿಷ್ಣು ದಾದಾಗೆ ನಮಿಸಲು ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಆಗಮಿಸುತ್ತಿದ್ದಾರೆ. 


ಅಭಿಮಾನಿಗಳೇ ಅಭಿಮಾನ್ ಸ್ಟುಡಿಯೋ ದಲ್ಲಿ ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸಲಿದ್ದಾರೆ. ನಂತರ ಪ್ರತಿವರ್ಷದಂತೆ ರಕ್ತದಾನ ಶಿಬಿರ ಹಾಗೂ ಅನ್ನದಾನ ಶಿಬಿರವನ್ನು ಆಯೋಜನೆ ಮಾಡಲಾಗಿದೆ.


ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಗೀತ ಗಾಯನ‌ ನಡೆಯಲಿದೆ. ಅಭಿಮಾನಿಗಳಿಂದಲೇ ವಿಷ್ಟು ಜಯಂತಿ ಆಚರಣೆ ನಡೆಯಲಿದೆ. ವಿಷ್ಣು ಎಲ್ಲರನ್ನೂ ಅಗಲಿ ಈಗಾಗಲೇ 8 ವರ್ಷಗಳು ಪೂರ್ಣಗೊಂಡಿದ್ದರೂ ನಾಡಿನ ಹಲವು ಭಾಗಗಳಿಂದ ಅಭಿಮಾನಿಗಳು ಆಗಮಿಸುತ್ತಿರುವುದು ವಿಷ್ಣು ಬಗೆಗಿನ ಅಪಾರ ಅಭಿಮಾನಕ್ಕೆ ಸಾಕ್ಷಿಯಾಗಿದೆ. ಇದೇ ಸಂದರ್ಭದಲ್ಲಿ ಸ್ಮಾರಕ ಆಗದಿರುವ ಬಗ್ಗೆ ಅಭಿಮಾನಿಗಳು ತಮ್ಮ ಬೇಸರ ವ್ಯಕ್ತ ಪಡಿಸಿದ್ದಾರೆ.