ಬೆಂಗಳೂರು: ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ, ಇದೀಗ ತಮ್ಮ ಕೊಡಗು ಜಿಲ್ಲೆಗೆ ಅಗತ್ಯವಿರುವ ಮೂಲಭೂತ ಸೌಕರ್ಯದ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಈ ಬಗ್ಗೆ ಸಂದೇಶ ರವಾನಿಸಿರುವ ರಶ್ಮಿಕಾ ಮಂದಣ್ಣ, ಮೂಲಭೂತ ಅಗತ್ಯತೆಗಳಲ್ಲಿ ಆಸ್ಪತ್ರೆ ಕೂಡ ಒಂದಾಗಿದೆ. ಆದರೆ ಕೂರ್ಗ್ ನಲ್ಲಿ ನಮಗೆ ಈ ಸೌಕರ್ಯವಿಲ್ಲ. ಉತ್ತಮ ಆಸ್ಪತ್ರೆಗೆ ನಾವು ಬಹಳ ದೂರ ಪ್ರಯಾಣ ಮಾಡಬೇಕು. ಕೊಡಗಿನಲ್ಲೇ ಒಂದು ಉತ್ತಮ ಆಸ್ಪತ್ರೆ ಸೌಲಭ್ಯ ದೊರೆತರೆ ಕೊಡಗಿನ ಜನರಿಗೆ ನಿಜಕ್ಕೂ ಸಹಕಾರಿಯಾಗುತ್ತದೆ ಎಂದಿದ್ದಾರೆ.


WeNeedEmergencyHospitalInKodagu ಹ್ಯಾಶ್ ಟ್ಯಾಗ್ ಜೊತೆಗೆ ದಯವಿಟ್ಟು ಸ್ಪಂದಿಸಿ ಎಂದು ಟ್ವೀಟ್ ಮಾಡಿರುವ ರಶ್ಮಿಕಾ ಮಂದಣ್ಣ ಈ ಟ್ವೀಟ್ ಅನ್ನು @CMofKarnataka ಅವರಿಗೆ ಟ್ಯಾಗ್ ಮಾಡಿದ್ದಾರೆ.