ನವದೆಹಲಿ: ದಕ್ಷಿಣ ಭಾರತದ ಸಿನಿ ತಾರಾ ದಂಪತಿಗಳಾಗಿದ್ದ ಸಮಂತಾ ಮತ್ತು ನಾಗಚೈತನ್ಯ ಅವರು ಶನಿವಾರದಂದು ವಿಚ್ಚೇದನವನ್ನು ಅಧಿಕೃತಗೊಳಿಸಿದ್ದರು.


COMMERCIAL BREAK
SCROLL TO CONTINUE READING

ಈಗ ಈ ವಿಚಾರವಾಗಿ ನಾಗಚೈತನ್ಯಅವರ ತಂದೆ ನಾಗಾರ್ಜುನ್ ಕೊನೆಗೂ ಮೌನ ಮುರಿದ್ದಾರೆ.ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು 'ಭಾರವಾದ ಮನಸ್ಸಿನಿಂದ ನಾನು ಹೇಳುವುದು ಇಷ್ಟೇ! ಸ್ಯಾಮ್ ಮತ್ತು ಛಾಯ್ ನಡುವೆ ಸಂಭವಿಸಿದ್ದೆಲ್ಲವೂ ದುರಾದೃಷ್ಟಕರ ಸಂಗತಿ.ಗಂಡ ಹೆಂಡತಿ ನಡುವೆ ಸಂಭವಿಸಿದ್ದೆಲ್ಲವೂ ವೈಯಕ್ತಿಕವಾಗಿರುವಂತದ್ದು .ನನಗೆ ಸ್ಯಾಮ್ ಮತ್ತು ಚಾಯ್ ಪ್ರಿಯರಾಗಿದ್ದಾರೆ.ನಮ್ಮ ಕುಟುಂಬ ಸ್ಯಾಮ್ ಜೊತೆ ಕಳೆದ ಕ್ಷಣಗಳನ್ನು ಸ್ಮರಿಸುತ್ತದೆ.ಆಕೆ ನಮಗೆ ಯಾವಾಗಲೂ ಆತ್ಮೀಯಳು.ಇಬ್ಬರಿಗೂ ದೇವರು ಒಳ್ಳೆಯದನ್ನು ಮಾಡಲಿ' ಎಂದು ಟ್ವೀಟ್ ಮಾಡಿದ್ದಾರೆ.


ನಾಲ್ಕು ವರ್ಷಗಳ ದಾಂಪತ್ಯದ ನಂತರ ಬೇರೆಯಾದ ನಾಗಚೈತನ್ಯ-ಸಮಂತಾ ಜೋಡಿ


ಶನಿವಾರ, ಸಮಂತಾ (Samantha) ಮತ್ತು ನಾಗ ಚೈತನ್ಯ ತಮ್ಮ ಪ್ರತ್ಯೇಕತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದರು.ದಂಪತಿಗಳು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದರು ಮತ್ತು ಅಭಿಮಾನಿಗಳಿಗೆ ತಮ್ಮ ಗೌಪ್ಯತೆಯನ್ನು ಗೌರವಿಸುವಂತೆ ಮನವಿ ಮಾಡಿದರು.


ಇದನ್ನೂ ಓದಿ: "ಸಂಭ್ರಮಿಸಬೇಕಾಗಿರುವುದು ಮದುವೆಗಳನ್ನಲ್ಲ, ವಿಚ್ಚೇದನಗಳನ್ನು"- ರಾಮ್ ಗೋಪಾಲ್ ವರ್ಮಾ


"ನಮ್ಮ ಎಲ್ಲ ಹಿತೈಷಿಗಳಿಗೆ, ಸುದೀರ್ಘ ಆಲೋಚನೆಯ ನಂತರ, ಚಾಯ್ ಮತ್ತು ನಾನು ನಮ್ಮ ಸ್ವಂತ ಮಾರ್ಗಗಳನ್ನು ಅನುಸರಿಸಲು ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ಒಂದು ದಶಕದ ಸ್ನೇಹವನ್ನು ಹೊಂದಲು ನಾವು ಅದೃಷ್ಟಶಾಲಿಯಾಗಿದ್ದೇವೆ, ಅದು ನಮ್ಮ ಸಂಬಂಧದ ಮೂಲಭೂತವಾಗಿ ಯಾವಾಗಲೂ ನಮ್ಮ ನಡುವೆ ವಿಶೇಷ ಬಾಂಧವ್ಯವನ್ನು ಹೊಂದಿರುತ್ತದೆ ಎಂದು ನಾವು ನಂಬುತ್ತೇವೆ.ಈ ಕಷ್ಟದ ಸಮಯದಲ್ಲಿ ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ನಮ್ಮನ್ನು ಬೆಂಬಲಿಸಬೇಕು ಮತ್ತು ನಾವು ಮುಂದುವರಿಯಲು ಬೇಕಾದ ಗೌಪ್ಯತೆಯನ್ನು ನಮಗೆ ನೀಡಬೇಕೆಂದು ನಾವು ವಿನಂತಿಸುತ್ತೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು,'ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.