ಜೀವನದ ಪ್ರತಿಯೊಂದು ಹೆಜ್ಜೆಯನ್ನ ಕಷ್ಟದಿಂದಲೇ ತುಳಿದ ಡಿ ಬಾಸ್ ಅವರದ್ದು ಮಗುವಿನಂತಹ ಮನಸ್ಸು ಎಂಬುದು ಅವರ ತುಂಬಾ ಹತ್ತಿರದವರಿಗೆ ಮಾತ್ರ ಗೊತ್ತು. ಆದ್ರೆ ಮುಂಗೋಪ ಅನ್ನೋದು ಅವರನ್ನ ಹೆಚ್ಚಾಗಿ ಕಾಡುತ್ತೆ ಅಷ್ಟೇ. ಅದು ನೋಡೋರ ಕಣ್ಣಿಗೆ ತಪ್ಪಾಗಿ ಕಾಣುವಂತೆ ಮಾಡುತ್ತಿದೆ ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಪ್ತ ಮೂಲಗಳು ಹೇಳಿಕೊಳ್ಳುತ್ತಿವೆ. 


COMMERCIAL BREAK
SCROLL TO CONTINUE READING

ಹೌದು, ಒಂದಷ್ಟು ತಿಂಗಳುಗಳಿಂದ ಡಿ ಬಾಸ್ ದರ್ಶನ್ ಕುಂತರೂ ತಪ್ಪು, ನಿಂತರೂ ತಪ್ಪು ಅನ್ನೋ ಲೆವೆಲ್ಲಿಗೆ ಸುದ್ದಿಯಾಗುತ್ತಿದ್ದಾರೆ. ಈ ಬಗ್ಗೆ ಜೀ ಕನ್ನಡ ನ್ಯೂಸ್ ದರ್ಶನ್ ಆಪ್ತರನ್ನ ಕೇಳಿದ ಸಂದರ್ಭದಲ್ಲಿ ಅವರುಗಳು ಹೇಳಿದಿಷ್ಟು.


ಇದನ್ನೂ ಓದಿ- ದೇಹದ ತೂಕ ಇಳಿಸಲು ಪ್ರಯತ್ನ ಮಾಡಲೇ ಇಲ್ವಾ ನಟಿ ರಕ್ಷಿತಾ ಪ್ರೇಮ್...!


ನೇರವಾಗಿ ಮಾತಾಡೋರನ್ನ ಜನ ಒಪ್ಪಿಕೊಳ್ಳಲು ಸಿದ್ದವಿರೋದಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಣ್ಣಿಗೆ ಕಂಡಿದ್ದನ್ನ ಮತ್ತು ಅನಿಸಿದ್ದನ್ನ ನೇರವಾಗಿ ಹೇಳಿಬಿಡುತ್ತಾರೆ. ಅದು ಕೆಲವರಿಗೆ ಕಷ್ಟ ಆಗುತ್ತೆ,ಇನ್ನೂ ಕೆಲವರಿಗೆ ಇಷ್ಟ ಆಗುತ್ತೆ ಎಂದು ಕೆಲವರು ಡಿ ಬಾಸ್ ಬಗ್ಗೆ ತಿಳಿಸಿದ್ದಾರೆ. 


ಪಾಸಿಟಿವ್ ಮ್ಯಾಟರ್ ಇದ್ದ ಕಡೆ ನೆಗೆಟಿವ್ ಕೂಡ ಇದ್ದೇ ಇರುತ್ತೆ. ಡಿ ಬಾಸ್ ಇವೆಲ್ಲವನ್ನೂ ತಲೆಗೆ ಹಾಕಿಕೊಳ್ಳದೆ ತಾವಾಯಿತು ತಮ್ಮ ಜೀವನ, ಫ್ಯಾನ್ಸ್ ಮತ್ತು ಪ್ರಾಣಿಗಳು ಅಂತ ಟೈಮ್ ಸ್ಪೆಂಡ್ ಮಾಡಿಕೊಂಡು ಹಾಯಾಗಿ ಇದ್ದಾರೆ ಅನ್ನೋ ಮಾತುಗಳನ್ನ ಅವರ ಆಪ್ತರು ಹೇಳುತ್ತಿದ್ದಾರೆ.


ಇದನ್ನೂ ಓದಿ- ನಟಿ ಜಯಸುಧಾಗೆ ಮೂರನೇ ಮದುವೆ ಸುದ್ದಿ ನಿಜವೇ ?


ಅದೇನೇ ಇರಲಿ ಮೊನ್ನೆಯಷ್ಟೇ ತನ್ನನ್ನ ಪ್ರೀತಿಸೋ ಸೆಲೆಬ್ರೆಟಿಗಳಿಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಆ ವಿಚಾರ ಕೂಡ ಚರ್ಚೆಯಲ್ಲಿದೆ. ಮತ್ತೊಂದು ಕಡೆ ಕ್ರಾಂತಿ ಸಕ್ಸಸ್ ಖುಷಿಯಲ್ಲಿ ಚಿತ್ರತಂಡ ಮತ್ತು ಡಿ ಬಾಸ್ ಫ್ಯಾನ್ಸ್ಗಳು ಇದ್ದಾರೆ. ಮುಂದಿನ ಪ್ರಾಜೆಕ್ಟ್ ಡಿ56 ಗೂ ಸಕಲ ರೀತಿಯಲ್ಲಿ ದರ್ಶನ್ ತಯಾರಿ ನಡೆಸುತ್ತಿದ್ದಾರೆ. ಸೋ ಇವರ ಮುಂದಿನ ಪ್ರಾಜೆಕ್ಟ್ ಗೆ ಒಳಿತಾಗಲಿ ಅನ್ನೋದೇ ನಮ್ಮ ಆಶಯ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.