Yamuna Srinidhi: ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಮೊದಲ ವಾರ ನಟಿ ಯಮುನಾ ಶ್ರೀನಿಧಿ ಎಲಿಮಿನೇಟ್‌ ಆಗಿ ಮನೆಗೆ ತೆರಳಿದ್ದರು. ಈ ಬಳಿಕ ಜೀ ಕನ್ನಡ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬಿಗ್‌ ಬಾಸ್‌ ಮನೆಯಲ್ಲಾದ ಅನುಭವ, ಅಲ್ಲಿದ್ದ ಸ್ಪರ್ಧಿಗಳ ಮನಸ್ಥಿತಿ ಸೇರಿ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ್ದು ಯಾರು?


ಚೈತ್ರಾ ಕುಂದಾಪುರ ಮತ್ತು ಜಗದೀಶ್‌ ಬಗ್ಗೆ ಮಾತನಾಡಿದ ಯಮುನಾ ಅವರು, "ಚೈತ್ರಾ ಮಾತನಾಡಿ ಬಿಡುತ್ತಾರೆ. ಆಮೇಲೆ ಪ್ಲೀಸ್‌ ಟೆಲಿಕಾಸ್ಟ್‌ ಮಾಡಬೇಡಿ ಅಂತಾರೆ. ಇನ್ನು ಜಗದೀಶ್‌ ಅವರು ಹೇಳಿನೇ ರೂಲ್ಸ್ ಬ್ರೇಕ್ ಮಾಡ್ತಾ ಇದ್ದರು" ಎಂದು ಹೇಳಿದ್ದಾರೆ.


ಕಿಚ್ಚ ಸುದೀಪ್‌ ಮುಂದೆ ಯಮುನಾ ಅವರನ್ನು ಹಾವು ಎಂದು ಧನರಾಜ್‌ ಆಚಾರ್ಯ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನಾನು ಅವರ ಮಾತನ್ನು ಸೀರಿಯಸ್‌ ಆಗಿ ತೆಗೆದುಕೊಂಡಿಲ್ಲ. ಅವರೇ ಹೇಳಿದ್ದರು; ನನಗೆ ಸುದೀಪ್‌ ಸರ್‌ ಕೇಳಬೇಕಾದಾಗ ಏನು ಹೇಳಬೇಕೆಂದು ತೋಚದೆ ಹಾಗೆ ಹೇಳಿದೆ ಏನೂ ಅಂದ್ಕೊಬೇಡಿ ಮೇಡಂ ಅಂತಾ. ಆದರೆ ಅವರ ಮಾತನ್ನು ಸೀರಿಯಸ್‌ ಆಗಿ ತೆಗೆದುಕೊಂಡೇ ಇಲ್ಲ, ಹೀಗಿರುವಾಗ ಅಂದುಕೊಳ್ಳೋದು ಏನ್‌ಬಂತು" ಎಂದು ಹೇಳಿದ್ದಾರೆ.


ಇದರ ಜೊತೆಗೆ ಬಿಗ್‌ಬಾಸ್‌ ಬಗ್ಗೆ ಮಾತನಾಡಿದ ಅವರು, "ನಾನು ನನ್ನ ಟ್ಯಾಲೆಂಟ್‌ ಬಿಗ್‌ಬಾಸ್‌ ಮನೆಯೊಳಗೆ ತೋರಿಸಿದ್ದೆ, ಡ್ಯಾನ್ಸ್‌ ಮಾಡಿದ್ದೆ, ಯೋಗ ಮಾಡಿದ್ದೆ. ಆದರೆ ಇವೆಲ್ಲವನ್ನೂ ಟೆಲಿಕಾಸ್ಟ್‌ ಮಾಡಿಲ್ಲ" ಎಂದು ಹೇಳಿದ್ದಾರೆ.


ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್‌-ಎನ್‌ಸಿಗೆ ವಿಜಯ: ಕಣಿವೆ ರಾಜ್ಯದ ನೂತನ ಸಿಎಂ ಇವರೇ!


"ಇನ್ನು ನನ್ನ ಪ್ರಕಾರ ಧರ್ಮಕೀರ್ತಿ ರಾಜ್ ಅವರು ಬಿಗ್‌ಬಾಸ್ ಗೆಲ್ಲಬೇಕು‌" ಎಂದು ಯಮುನಾ ಶ್ರೀನಿಧಿ ಸಂದರ್ಶನದಲ್ಲಿ ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ