Actress Manjula: ನಟಿ ಮಂಜುಳಾ... ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಿದ ನಟಿ ಮಂಜುಳಾ ತಮ್ಮ ಅತ್ಯದ್ಭುತವಾದ ಆಕ್ಟಿಂಗ್‌ನಿಂದಲೇ ಸೈ ಎನಿಸಿಕೊಂಡವರು. ಇಂತಹ ಅದ್ಬುತ ಕಲಾವಿದೆ ತಮ್ಮ ಮೊದಲ ಸಿನಿಮಾದಲ್ಲೇ ರಿಜೆಕ್ಟ್ ಆಗಿದ್ರು. ಅದು ಯಾವ ಸಿನಿಮಾ..? ರಿಜೆಕ್ಟ್ ಆಗಲು ಕಾರಣ ಏನು..? ಮುಂದೆ ಓದಿ...


COMMERCIAL BREAK
SCROLL TO CONTINUE READING

ಅದು ಬಂಗಾರದ ಪಂಜರ ಸಿನಿಮಾ ಮಾಡಲು ತಯಾರಾಗುತ್ತಿದ್ದ ಸಮಯ, ಕೆ ಸಿ ಎನ್ ಗೌಡರು ಸಿನಿಮಾಗಾಗಿ ಹೊಸ ನಾಯಕಿಯ ಹುಡುಕಾಟದಲ್ಲಿ ಇರ್ತಾರೆ. ತಮ್ಮ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಹೊಸ ನಾಯಕಿ ನಟಿಯನ್ನು ಪರಿಚಯಿಸಬೇಕು ಎಂಬುದು ಗೌಡರ ಆಸೆಯಾಗಿರುತ್ತದೆ.


ಹೌದು, ಡಾ. ರಾಜ್ ಕುಮಾರ್ ಅಭಿನಯದ ಸಿನಿಮಾ ಆಗಿನ ಕಾಲಕ್ಕೆ ಸದ್ದು ಮಾಡಿದ ಚಿತ್ರಗಳಲ್ಲಿ ಒಂದು. ಈ ಸಿನಿಮಾದ ಮೂಲಕ ಸ್ಯಾಂಡಲ್ವುಡ್‌ಗೆ ಹೊಸ ನಾಯಕಿಯನ್ನು ಪರಿಚಯಿಸಬೇಕು ಎಂಬ ಆಸೆ ಗೌಡರದ್ದು. ಈ ಕುರಿತು ಛಾಯಾಗ್ರಾಹಕರಾದ ಅಶ್ವಥ್‌ ಅವರೊಂದಿಗೆ ಚರ್ಚೆ ಮಾಡಿ , ಸಿನಿಮಾಗೆ ಹೊಸ ನಟಿ ಬೇಕು ನಿಮ್ಮ ಬಳಿ ಒಳ್ಳೆ  ಫೋಟೊ ಇದ್ದರೆ ಕೊಡಿ ಎಂದು ಕೇಳುತ್ತಾರೆ .


ಕೆ ಸಿ ಎನ್‌ ಗೌಡರು ಕೇಳಿದ ಹಾಗೆ ಅಶ್ವಥ್‌ ಮಾರನೇ ದಿನ ನಟಿ ಮಂಜುಳಾ ಅವರ ಫೋಟೋಗಳನ್ನ ತೆಗೆದುಕೊಂಡು ಬರ್ತಾರೆ. ಅಲ್ಲಿಯವರೆಗೆ ನಟಿ ಮಂಜುಳಾ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಸ್ವಲ್ಪ ಹೆಸರು ಕೂಡ ಮಾಡಿರುತ್ತಾರೆ. ಮಂಜುಳಾ ಅವರ ನಟನೆಯನ್ನು ಕಣ್ಣಾರೆ ಕಂಡಿದ್ದ ಅಶ್ವಥ್‌ ಅವರಿಗೆ , ಮಂಜಳಾಗೆ ಒಂದು ಒಳ್ಳೆ ಪಾತ್ರ ಕೊಡಿಸಿದರೆ ಮುಂದೆ ದೊಡ್ಡ ನಟಿಯಾಗುತ್ತಾರೆ ಎನ್ನುವ ಅಭಿಪ್ರಾಯವಿರುತ್ತೆ. ಆದ ಕಾರಣ ಇವನೆಲ್ಲ ಯೋಚಿಸಿ ಮಂಜುಳಾ ಫೋಟೊ ಸಂಗ್ರಹಿಸಿ ಗೌಡರಿಗೆ ಕೊಡಲು ಅಶ್ವಥ್‌ ಮುಂದಾಗುತ್ತಾರೆ.


ಇದನ್ನೂ ಓದಿ: ಕನ್ನಡ ನಟಿಯರಲ್ಲಿ ಅತೀ ಹೆಚ್ಚು ಇನ್ಸ್ಟಾಗಾಮ್‌ ಫಾಲೋವರ್ಸ್‌ ಹೊಂದಿರುವ ನಟಿ ಇವರೇ ನೋಡಿ...


ಅಲ್ಲಿಯವರೆಗೂ ಎಲ್ಲವೂ ಸುಸೂತ್ರವಾಗಿ ಸಾಗುತ್ತ ಇರುತ್ತದೆ. ನಂತರ ಆದ್ದದ್ದು ವಿಧಿಯ ಆಟ. ಹೌದು, ಅದೊಂದೇ ಒಂದು ಘಟನೆ ಮಂಜುಳ ಅವರಿಗೆ ಬಂಗಾರದ ಪಂಜರ ಸಿನಿಮಾದಲ್ಲಿ ಸಿನಿಮಾ ಅವಕಾಶ ಕೈತಪ್ಪುವಂತೆ ಮಾಡುತ್ತೆ. ಅಶ್ವಥ್‌, ಕೆ ಸಿ ಎನ್ ಗೌಡರಿಗೆ ತೋರಿಸಲೆಂದು ಫೋಟೋಗಳನ್ನ ತೆಗೆದುಕೊಂಡು ಬರ್ತಾರೆ. ಬೇರೆ ಕೆಲಸಗಳಲ್ಲಿ ಕೊಂಚ ಬ್ಯುಸಿ ಇದ್ದ ಗೌಡ್ರು ಫೋಟೋಗಳನ್ನ ಟೇಬಲ್ ಮೇಲೆ ಇಟ್ಟು ಹೋಗಿ, ನಾನು ಬಿಡುವಾದ ಮೇಲೆ ನೋಡ್ತೀನಿ ಅಂಥ ಹೇಳ್ತಾರೆ. ಆದರೆ ಟೇಬಲ್ ಮೇಲೆ ಫೋಟೋ ಇಟ್ಟ ಅಶ್ವಥ್‌  ಫ್ಯಾನ್ ಆನ್‌ ಆಗಿರುವುದನ್ನ ಗಮನಿಸಲ್ಲ. ಹಾಗೆ ಬಿಟ್ಟು ಹೋದ ಕಾರಣ ಫೋಟೋಗಳು ಫ್ಯಾನ್ ನ ಗಾಳಿಗೆ ಹಾರಿ ಡಸ್ಟ್‌ಬಿನಲ್ಲಿ ಹೋಗಿ ಬಿದ್ದು ಬಿಡುತ್ತೆ. 


ಫೋಟೋಗಳು ಡಸ್ಟ್‌ಬಿನ್‌ನಲ್ಲಿ ಬಿದ್ದದ್ದನ್ನು ನೋಡಿದ ಗೌಡರು ಅಶ್ವಥ್‌ ಅವರನ್ನು ಕರೆದು, ಇದೇನಾಯ್ತು ಅಶ್ವಥ್‌, ಫೋಟೋಗಳನ್ನ ನೋಡೋ ಮುಂಚೆಯೇ ಡಸ್ಟ್‌ಬಿನ್‌ಗೆ ಬಿದ್ದಿವೆ. ಇದೇನು ಒಳ್ಳೆ ಸೂಚನೆಯಂತೆ ಕಾಣುತ್ತಿಲ್ಲ. ಈ ಹುಡ್ಗಿ ನಮ್ಮ ಸಿನಿಮಾಗೆ ಬೇಡ ಬಿಡಿ ಎಂದು ಬಿಡುತ್ತರೆ. ಈ ರೀತಿ ಮಂಜುಳಾಗೆ ಬಂಗಾರದ ಪಂಜರ ಸಿನಿಮಾದಲ್ಲಿ ನಟಿಸುವ ಚಾನ್ಸ್ ಕೈತಪ್ಪುತ್ತೆ. ಸಿನಿಮಾಗೆ ಆರತಿ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗುತ್ತೆ. 


ಮೊದಲ ಸಿನಿಮಾದಲ್ಲಿ ಚಾನ್ಸ್ ತಪ್ಪಿದ್ರು, ಅದೇ ವರ್ಷ ಮಂಜುಳಾ ಅವರಿಗೆ ಅದೃಷ್ಟ ಕೈ ಹಿಡಿಯುತ್ತೆ, ಡಾ. ರಾಜ್ ಅಭಿನಯದ ʻಸಂಪತ್ತಿಗೆ ಸವಾಲ್ʼ ಸಿನಿಮಾದಲ್ಲಿ ಮಂಜುಳಾ ನಾಯಕಿಯಾಗಿ ಚಾನ್ಸ್ ಗಿಟ್ಟಿಸಿಕೊಳ್ತರೆ. ಬಾಯ್‌ ಬಡಕಿ ಪಾತ್ರದಲ್ಲಿ ಮಂಜುಳಾ ಎಲ್ಲರ ಮನ ಗೆಲ್ತಾರೆ.


ಮಂಜುಳಾ ನಟನೆಯ ʻಸಂಪತ್ತಿಗೆ ಸವಾಲ್ʼ ಆಗಿನ ಕಾಲಕ್ಕೆ ಸಖತ್ ಹಿಟ್ ಆಗುತ್ತೆ. ಅಲ್ಲಿಂದ ಮಂಜುಳಾ ಅವರ ಸಿನಿ ಪಯಣವೇ ಬದಲಾಗಿ ಹೋಗುತ್ತೆ. ಇಂದಿಗೂ ಕೂಡ ನಟಿ ಮಂಜುಳಾ ಅವರನ್ನು ಮನದಲ್ಲಿಟ್ಟು ಅಭಿಮಾನಿಗಳು ಪೂಜಿಸುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.