ಬೆಂಗಳೂರು: ನಮ್ಮ ಬೆಳಗಿನ ಉಪಹಾರ ಎಷ್ಟು ಆರೋಗ್ಯಕರವಾಗಿರುತ್ತದೆಯೋ ಅಷ್ಟೇ ನಮ್ಮ ಜೀವನ ಕೂಡ ಆರೋಗ್ಯದಿಂದ ಕೂಡಿರುತ್ತದೆ. ಆಹಾರದ ಬಗ್ಗೆ ಒಂದು ಜನಪ್ರಿಯ ನಾಣ್ನುಡಿ ಇದೆ- ಯಾವುದೇ ವ್ಯಕ್ತಿ ಬೆಳಗಿನ ಉಪಾಹಾರವನ್ನು ರಾಜನಂತೆ, ಮಧ್ಯಾಹ್ನದ ಊಟವನ್ನು ರಾಜಕುಮಾರನಂತೆ ಮತ್ತು ರಾತ್ರಿಯ ಊಟವನ್ನು ಭಿಕ್ಷುಕನಂತೆ ಮಾಡಬೇಕು ಎನ್ನಲಾಗುತ್ತದೆ. ನಮ್ಮ ಬೆಳಗಿನ ಉಪಾಹಾರವು ಇಡೀ ದಿನಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ನಮಗೆ ಪೂರೈಸುವಂತಿರಬೇಕು ಎಂಬುದು ಈ ಮಾತಿನ ಸಾರ. ಬೆಳಗಿನ ಉಪಾಹಾರದ ನಂತರ ನಾವು ಹೆಚ್ಚು ಶಕ್ತಿಯುತವಾಗಿರಬೇಕು. ಬೆಳಗಿನ ಉಪಾಹಾರದಲ್ಲಿ ನೀವು ಅನಾರೋಗ್ಯಕರ ಆಹಾರವನ್ನು ಸೇವಿಸಿದರೆ ಅದು ನಿಮ್ಮ ಇಡೀ ದಿನಕ್ಕೆ ಒಳ್ಳೆಯದಲ್ಲಿ. (Health News In Kannada)


COMMERCIAL BREAK
SCROLL TO CONTINUE READING

ಮಧುಮೇಹದಂತಹ ಗಂಭೀರ ಸಮಸ್ಯೆಗಳಿಂದ ಬಳಲುತ್ತಿರುವ ಜನರ ವಿಷಯಕ್ಕೆ ಬಂದರೆ, ಬೆಳಗಿನ ಉಪಾಹಾರವು ಅವರಿಗೆ ತುಂಬಾ ಮುಖ್ಯವಾಗಿದೆ. ಮಧುಮೇಹಿಗಳು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಲೇಬೇಕಾದ ಕೆಲವು ವಿಷಯಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡುತ್ತಿದ್ದು, ಅವು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರ್ಮನೆಂಟ್ ಆಗಿ ನಿಯಂತ್ರಣದಲ್ಲಿಡುತ್ತವೆ. 


ಮಧುಮೇಹಿಗಳು ಈ ಪದಾರ್ಥಗಳನ್ನು ಸೇವಿಸಬಾರದು
>> ಮಧುಮೇಹ ರೋಗಿಗಳು ಹೆಚ್ಚು ಉಪ್ಪನ್ನು ಸೇವಿಸಬಾರದು.
>> ಮಧುಮೇಹ ರೋಗಿಗಳು ತಂಪು ಪಾನೀಯಗಳನ್ನು ಸಹ ಸೇವಿಸಬಾರದು.
>> ಮಧುಮೇಹ ರೋಗಿಯು ಸಕ್ಕರೆ ಮತ್ತು ಸಂಸ್ಕರಿಸಿದ ಸಕ್ಕರೆಯನ್ನು ಸೇವಿಸಬಾರದು.
>> ಮಧುಮೇಹ ರೋಗಿಯು ಜಂಕ್ ಫುಡ್ ಮತ್ತು ಫಾಸ್ಟ್ ಫುಡ್ ಅನ್ನು ಸಹ ಸೇವಿಸಬಾರದು.
>> ಮಧುಮೇಹ ರೋಗಿಯು ಆಲ್ಕೊಹಾಲ್ಯುಕ್ತ ಪಾನೀಯಗಳನ್ನು ಸೇವಿಸಬಾರದು.


ಮಧುಮೇಹಿಗಳು ಖಾಲಿ ಹೊಟ್ಟೆಯಲ್ಲಿ ಈ ಪದಾರ್ಥಗಳನ್ನು ಸೇವಿಸಬೇಕು.
ಬಿಸಿ ನೀರಿನಲ್ಲಿ ನಿಂಬೆ ಬೆರೆಸಿ ಕುಡಿಯಿರಿ

ನೀವು ಮಧುಮೇಹ ರೋಗಿಗಳಾಗಿದ್ದರೆ, ನೀವು 1 ಲೋಟ ಬಿಸಿ ನೀರಿಗೆ ಒಂದು ನಿಂಬೆ ರಸ ಬೆರೆಸಿ ಮತ್ತು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದನ್ನು ಕುಡಿಯುವುದರಿಂದ ನಮ್ಮ ದೇಹವು ನಿರ್ವಿಷಗೊಳ್ಳುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ.


ಹಾಗಲಕಾಯಿ ರಸ
ನೀವು ಮಧುಮೇಹದಿಂದ ಬಳಲುತ್ತಿದ್ದರೆ, ನೀವು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ 1 ಕಪ್ ಹಾಗಲಕಾಯಿ ರಸವನ್ನು ಕುಡಿಯಬೇಕು. ಹಾಗಲಕಾಯಿಯಲ್ಲಿ ಪಾಲಿಪೆಪ್ಟೈಡ್ ಇನ್ಸುಲಿನ್ ಕಂಡುಬರುತ್ತದೆ, ಇದು ಮಧುಮೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.


ಮೆಂತ್ಯ ನೀರು
1 ಚಮಚ ಮೆಂತ್ಯವನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಮತ್ತು ನೆನೆದ  ಮೆಂತ್ಯ ಕಾಳುಗಳನ್ನು ಜಗಿದು ತಿನ್ನಿರಿ. ಇದರಿಂದ ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ, ಮಧುಮೇಹ ನಿಯಂತ್ರಣವೂ ಅವುಗಳಲ್ಲಿ ಒಂದಾಗಿದೆ.


ಆಮ್ಲಾ ಜ್ಯೂಸ್
ವಿಟಮಿನ್ ಸಿ ಸಮೃದ್ಧವಾಗಿರುವ ಆಮ್ಲಾ ನಮ್ಮ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಸಾಕಷ್ಟು ವಿಟಮಿನ್ ಸಿ ಸೇವನೆಯು ನಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಆದ್ದರಿಂದ, ಮಧುಮೇಹಿಗಳು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆಮ್ಲಾ ಜ್ಯೂಸ್ ಅನ್ನು ಕುಡಿಯಬೇಕು.


ಇದನ್ನೂ ಓದಿ-ಕೂದಲುದುರುವುದನ್ನು ತಡೆಗಟ್ಟಿ, ದುಪ್ಪಟ್ಟು ವೇಗದಲ್ಲಿ ಬೆಳೆಯುವಂತೆ ಮಾಡಲು ಪಾಲಕ್ ಅನ್ನು ಈ ರೀತಿಯಾಗಿ ಬಳಸಿ!


ಜೀರಿಗೆ ಟೀ
1 ಟೀಚಮಚ ಜೀರಿಗೆಯನ್ನು 1 ಲೋಟ ನೀರಿನಲ್ಲಿ ಹಾಕಿ ಮತ್ತು ನೀರು ಅರ್ಧದಷ್ಟು ಕಡಿಮೆಯಾಗುವವರೆಗೆ ಅದನ್ನು ಕುದಿಸಿ. ಈಗ ಅದನ್ನು ಸೋಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಜೀರಿಗೆಯಲ್ಲಿ ಕೆಲವು ನೈಸರ್ಗಿಕ ಅಂಶಗಳು ಕಂಡುಬರುತ್ತವೆ. ಅವು ನಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ಟೀ ಕುಡಿಯುವುದರಿಂದ ನಮ್ಮ ಮಧುಮೇಹವನ್ನು ನಿಯಂತ್ರಣದಲ್ಲಿರುತ್ತದೆ.


ಇದನ್ನೂ ಓದಿ-ಮಧುಮೇಹವನ್ನು ಪರ್ಮನೆಂಟ್ ಆಗಿ ನಿಯಂತ್ರಿಸಬೇಕೆ? ಬೆಳಗ್ಗೆ ಖಾಲಿ ಹೊಟ್ಟೆ ಈ ನೀರು ಸೇವಿಸಿ ನೋಡಿ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ