Hubli Ganeshotsava: ಇಂದು ಪ್ರವಾಸಿ ಮಂದಿರದಲ್ಲಿ ಹುಬ್ಬಳ್ಳಿಯಲ್ಲಿ ನಡೆಯಲಿರುವ ಗಣೇಶೋತ್ಸವದ ಪ್ರಯುಕ್ತವಾಗಿ  ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕರಾದ  ಮಹೇಶ್ ಟೆಂನಗಿನಕಾಯಿ ರವರು ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.


COMMERCIAL BREAK
SCROLL TO CONTINUE READING

ಈ ಸಭೆಯಲ್ಲಿ ಮಾತನಾಡಿದ ಶಾಸಕ ಮಹೇಶ್ ಟೆಂಗಿನಕಾಯಿ, ಮಹಾನಗರದಲ್ಲಿ ನಡೆಯುತ್ತಿರುವ 11 ದಿನಗಳ ಗಣೇಶೋತ್ಸವ ಕಾರ್ಯಕ್ರಮಕ್ಕೆ ಏನೇನೋ ತಯಾರಿಗಳು ನಡೆದಿದೆ ಎಂದು ಸರ್ಕಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಬ್ಬದ ಸಂದರ್ಭದಲ್ಲಿ ವಿದ್ಯುತ್ ಕಡಿತ ಮಾಡಬಾರದು. ಹೆಸ್ಕಾಂ ಸಿಬ್ಬಂದಿಗಳು ಮುಂಜಾಗ್ರತ ವಹಿಸಬೇಕು ಎಂದು ತಾಕೀತು ಮಾಡಿದರು. 


ಇದನ್ನೂ ಓದಿ- ಮುಂದಿನ‌ 3 ದಿನ ಭಾರಿ ಮಳೆ ಸಾಧ್ಯತೆ: ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್


ಅಷ್ಟೇ ಅಲ್ಲದೆ, ಪಾಲಿಕೆಯ ಅಧಿಕಾರಿಗಳು ನೀರು ರಸ್ತೆ ಮಹಾನಗರ ಸ್ವಚ್ಛತೆ ಜೊತೆಗೆ ತಕ್ಷಣ ಗಣಪತಿ ಮೆರವಣಿಗೆ ನಡೆಯುವ ರಸ್ತೆಗಳನ್ನ ತೆಗ್ಗು ದಿನ್ನಿಗಳನ್ನ ತಕ್ಷಣ ಮುಚ್ಚಬೇಕು. ಅರಣ್ಯ ಇಲಾಖೆಯವರು ರಸ್ತೆ ಅಕ್ಕಪಕ್ಕ ಬೆಳೆದ ಗಿಡಗಳ ಕೊಂಬಿಗಳನ್ನ ತೆಗೆಯಬೇಕು. ಹೊರ ಊರುಗಳಿಂದ ಬರುವಂತಹ ಜನರಿಗೆ ಸಾರಿಗೆ ವ್ಯವಸ್ಥೆ ಮಾಡಬೇಕು. ಜನರ ತೊಂದರೆಗೆ ತಕ್ಷಣ ಸ್ಪಂದನೆ ನೀಡಬೇಕು ಎಂದು ಅಧಿಕಾರಿಗಳಿಗೆ ಈ ಸಭೆಯಲ್ಲಿ ತಿಳಿಸಿದರು. 


ಮಹಾಪೌರು ಹಾಗೂ ಪ್ರಮುಖರು ಮಾತನಾಡಿ ಯಾವುದೇ ತೊಂದರೆ ಬರಹದ ಹಾಗೆ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು  ಎಂದರು.


ಇದನ್ನೂ ಓದಿ- ಡೆಂಘಿ ಜ್ವರವನ್ನು ಸಾಂಕ್ರಾಮಿಕ ಕಾಯಿಲೆ ಎಂದು ಘೋಷಣೆ, ಸ್ವಚ್ಚತೆ ನಿರ್ಲಕ್ಷಿಸಿದರೆ ಇನ್ಮುಂದೆ ದಂಡ..


ಈ ಸಭೆಯಲ್ಲಿ ಆಯುಕ್ತರಾದ ಡಾ. ಈಶ್ವರ್ ಉಳ್ಳಾಗಡ್ಡಿ . ಉಪ ಮಹಾಪೌರರಾದ ದುರ್ಗಮ್ಮ ಬಿಜ್ವಾಡ್. ಎಸಿಪಿ ಉಮೇಶ್ ಚಿಕ್ಕಮಠ . ಪಾಲಿಕೆಯ ಸಭಾ ನಾಯಕ ವೀರಣ್ಣ ಸೌವಡಿ  ಪಾಲಿಕೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.