ನವದೆಹಲಿ: ಛತ್ತೀಸ್ ಗಡ್ ದಲ್ಲಿರುವ ದಾಂತೆವಾಡ್ ಜಿಲ್ಲೆಯಲ್ಲಿ ನಕ್ಸಲರ ದಾಳಿಗೆ ಓರ್ವ ಸಿಆರ್ಪಿಎಫ್ ಸೈನಿಕ ಮೃತಪಟ್ಟಿದ್ದಾನೆ, ಐವರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ನಕ್ಸಲರು ಸಿಆರ್ಪಿಎಫ್ 231 ಸೇನಾ ತುಕಡಿ ಮೇಲೆ ದಾಳಿ ಮಾಡಲು ಐಇಡಿಯನ್ನು ಬಳಸಿದ್ದಾರೆ ಎಂದು ತಿಳಿದುಬಂದಿದೆ.ಈ ಘಟನೆ ಸಂಜೆ 4.30ಕ್ಕೆ ದಾಂತೆವಾಡದಲ್ಲಿರುವ ಸಿಆರ್ಪಿಎಫ್ ಕಚೇರಿ ಹತ್ತಿರ ನಡೆದಿದೆ. ಈ ದಾಳಿಯಲ್ಲಿ ಓರ್ವ ಸಿಆರ್ಪಿಎಫ್ ನ ಜವಾನ ಮೃತಪಟ್ಟು ಐವರಿಗೆ ಗಾಯಗಳಾಗಿವೆ ಎಂದು ಹಿರಿಯ ಪ್ಯಾರಾಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ. 



ಕೊಂಡಾಪುರ್ ಮತ್ತು ಕಮಲಾ ಪುರ್ ಗ್ರಾಮಗಳಲ್ಲಿರುವ ಅರಣ್ಯ ವ್ಯಾಪ್ತಿಯಲ್ಲಿ ಈ ದಾಳಿ ನಡೆದಿದ್ದು. ಈ ನಕ್ಸಲರ ದಾಳಿಗೆ ಸಿಆರ್ಪಿಎಫ್ ತುಕಡಿ ಪ್ರತಿ ದಾಳಿ ನಡೆಸಿದೆ. ಈ ವೇಳೆ ಐವರು ಸೈನಿಕರಿಗೆ ಗಾಯಗಳಾಗಿವೆ ಎಂದು ದಾಂತೆವಾಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಭಿಷೇಕ ಪಲ್ಲವ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.