ಮುಜಾಫರಪುರ: ಬಿಹಾರದ ಮುಜಫ‌ರಪುರ ದಲ್ಲಿ ದಟ್ಟ ಮಂಜು ಆವರಿಸಿದ್ದ ಕಾರಣ ರಸ್ತೆ ಕಾಣದೆ ಹಲವು ವಾಹನಗಳು ಒಂದರ ಹಿಂದೊಂದು ಗುದ್ದಿದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, 15 ಮಡಿ ತೀವ್ರ ಗಾಯಗೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಶುಕ್ರವಾರ ಬೆಳಿಗ್ಗೆ ಮುಜಫ‌ರಪುರ ರಾಷ್ಟ್ರೀಯ ಹೆದ್ದಾರಿ 28ರಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. 


ದೆಹಲಿಯ ಹೊರವಲಯದ ಖಂಜ್ವಾಲಾ-ಬವಾನ ರಸ್ತೆಯಲ್ಲಿ ಗುರುವಾರ ಮುಂಜಾನೆ ಇಂತಹದೇ ಘಟನೆ ನಡೆದು 25ಕ್ಕೂ ಹೆಚ್ಚು ವಾಹನಗಳು ಘರ್ಷಣೆಯಾಗಿ ಹಲವರು ಗಾಯಗೊಂಡಿದ್ದರು.