ನವದೆಹಲಿ: ನ್ಯಾಯಾಂಗವು ಯಾವುದೇ ಸರ್ಕಾರ ಮತ್ತು ಸಮಾಜದ ಪ್ರಮುಖ ಅಂಗವಾಗಿದೆ. ಭಾರತದ ಸರ್ವೋಚ್ಚ ನ್ಯಾಯಾಲಯವು ವಾಸ್ತವವಾಗಿ ವಿಶ್ವದ ಅತ್ಯಂತ ಶಕ್ತಿಶಾಲಿ ನ್ಯಾಯಾಲಯಗಳಲ್ಲಿ ಒಂದಾಗಿದೆ. ಇಂತಹ ಸಂದರ್ಭದಲ್ಲಿ ದೇಶದ ಪಥವನ್ನು ಬದಲಿಸಿದ 10 ಮಹತ್ವದ ತೀರ್ಪುಗಳನ್ನು ನಾವಿಲ್ಲಿ ನೋಡೋಣ ಬನ್ನಿ..!


COMMERCIAL BREAK
SCROLL TO CONTINUE READING

1. ಕೇಶವಾನಂದ ಭಾರತಿ ಸ್ವಾಮೀಜಿ VS ಕೇರಳ ರಾಜ್ಯ, 1973: ಈ ಪ್ರಕರಣದಲ್ಲಿ, ಮೂಲಭೂತ ಹಕ್ಕುಗಳನ್ನು ಒಳಗೊಂಡಂತೆ ಸಂವಿಧಾನದ ಯಾವುದೇ ಭಾಗವು ಸಂಸತ್ತಿನ ತಿದ್ದುಪಡಿ ಮೂಲಕ ಮಾಡಬಹುದು, ಆದರೆ ಅದು ಸಂವಿಧಾನದ ಮೂಲ ರಚನೆಗೆ ಯಾವುದೇ ಧಕ್ಕೆಯಾಗದಂತೆ ತಿದ್ದುಪಡಿ ಮಾಡಬೇಕು ಇಲ್ಲದಿದ್ದರೆ ಅದನ್ನು ಅಮಾನ್ಯಗೊಳಿಸಲಾಗುವುದು ಎಂದು ತೀರ್ಪು ನೀಡಿತು.ಈ ತೀರ್ಪು ಭಾರತೀಯ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಈಗ ರಕ್ಷಣಾ ಕವಚವಾಗಿರುವ ತೀರ್ಪಾಗಿದೆ. 


2. ಖಾಸಗಿತನದ ಹಕ್ಕು:  2017 ರಲ್ಲಿನ ಪುಟ್ಟಸ್ವಾಮಿ VS ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಖಾಸಗಿತನದ ಹಕ್ಕನ್ನು ಸುಪ್ರೀಂ ಕೋರ್ಟ್ ಮೂಲಭೂತ ಹಕ್ಕು ಎಂದು ಘೋಷಿಸಿತು.


3. ಸೆಕ್ಷನ್ 377 ರದ್ದತಿ : 2018 ರಲ್ಲಿ, ಸರ್ವೋಚ್ಚ ನ್ಯಾಯಾಲಯವು ಸೆಕ್ಷನ್ 377 ಅಸಂವಿಧಾನಿಕ ಎಂದು ತೀರ್ಪು ನೀಡಿತು. ಆ ಮೂಲಕ ಒಂದೇ ಲಿಂಗದ ವಯಸ್ಕರ ನಡುವಿನ ಸಮ್ಮತಿಯ ಲೈಂಗಿಕ ನಡವಳಿಕೆಯು ಅಪರಾಧ ಎನ್ನುವುದನ್ನು ರದ್ದು ಗೊಳಿಸಿತು


4. ಮೇನಕಾ ಗಾಂಧಿ vs ಯೂನಿಯನ್ ಆಫ್ ಇಂಡಿಯಾ: 1977 ರಲ್ಲಿ, ನಾಗರಿಕರಿಗೆ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಹೊಂದಿದೆ ಎಂದು ಹೇಳಿದೆ (ಸಂವಿಧಾನದ 21 ನೇ ವಿಧಿ), ಇದು ಮೂಲಭೂತ ಹಕ್ಕು ಪ್ರಕರಣಗಳಿಗೆ ಪ್ರಮುಖ ನಿದರ್ಶನವಾಗಿದೆ.


5. ವಿಶಾಕಾ ಮತ್ತು ರಾಜಸ್ಥಾನ ರಾಜ್ಯ (1997): ಈ ಪ್ರಕರಣವು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ವ್ಯಾಖ್ಯಾನಗಳನ್ನು ಮತ್ತು ಅದನ್ನು ಎದುರಿಸಲು ಮಾರ್ಗಸೂಚಿಗಳನ್ನು ನೀಡಿತು.


ಇದನ್ನೂ ಓದಿ: ಲಾರಿಗೆ ಅಡ್ಡ ಹಾಕಿ ಹಣಕ್ಕೆ ಬೇಡಿಕೆ: ನಾಲ್ವರು ಬ್ಲ್ಯಾಕ್ ಮೇಲ್ ಪತ್ರಕರ್ತರು ಅರೆಸ್ಟ್..!


6. ಲಿಲಿ ಥಾಮಸ್ ಮತ್ತು ಯೂನಿಯನ್ ಆಫ್ ಇಂಡಿಯಾ (2013): ಚುನಾವಣಾ ಸುಧಾರಣೆಗಳಿಗೆ ಸಂಬಂಧಿಸಿದಂತೆ, ತೀರ್ಪು ದೇಶದ ಮಹತ್ವದ ಭಾಗವಾಗಿದೆ. "ಯಾವುದೇ ಸಂಸದರು, ಶಾಸಕರು ಅಥವಾ ಎಂಎಲ್‌ಸಿ ಅಪರಾಧದಲ್ಲಿ ತಪ್ಪಿತಸ್ಥರೆಂದು ಮತ್ತು ಕನಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದವರು ತಕ್ಷಣವೇ ಸದನದಲ್ಲಿ ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ" ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು.


7. ಐಆರ್ ಕೊಯೆಲ್ಹೋ ಪ್ರಕರಣ, 2007: ಇದು ನ್ಯಾಯಾಂಗ ಪರಿಶೀಲನೆಯ ಮಹತ್ವ ಆ ನಿಟ್ಟಿನಲ್ಲಿ ನ್ಯಾಯಾಂಗವು ಅಧಿಕಾರವನ್ನು ಹೊಂದಿರುವ ಕುರಿತಾಗಿ ತೀರ್ಪನ್ನು ನೀಡಿತು.


8. ನ್ಯಾಶನಲ್ ಲೀಗಲ್ ಸರ್ವಿಸಸ್ ಅಥಾರಿಟಿ VS ಯೂನಿಯನ್ ಆಫ್ ಇಂಡಿಯಾ: ಇದು ಸರ್ವೋಚ್ಚ ನ್ಯಾಯಾಲಯದ ಮಹತ್ವದ ತೀರ್ಪು, ಮಂಗಳಮುಖಿಯರನ್ನು ತೃತೀಯ ಲಿಂಗಿಗಳೆಂದು ಘೋಷಿಸಿತು ಮತ್ತು ಸಂವಿಧಾನದ ಅಡಿಯಲ್ಲಿ ನೀಡಲಾದ ಮೂಲಭೂತ ಹಕ್ಕುಗಳು ಅವರಿಗೆ ಸಮಾನವಾಗಿ ಅನ್ವಯಿಸುತ್ತವೆ ಎಂದು ಒತ್ತಿಹೇಳಿತು.


9. ತ್ರಿವಳಿ ತಲಾಖ್ ತೀರ್ಪು (2016): ಐವರು ನ್ಯಾಯಾಧೀಶರ ಸಂವಿಧಾನ ಪೀಠವು 3:2 ಅನ್ನು ತಕ್ಷಣವೇ ತ್ರಿವಳಿ ತಲಾಖ್ ಪದ್ಧತಿಯು ಅಸಾಂವಿಧಾನಿಕ ಎಂದು ಘೋಷಿಸಿದೆ.


10. ಇಂದ್ರ ಸಾಹ್ನಿ ಮತ್ತು ಇತರರು VS ಯೂನಿಯನ್ ಆಫ್ ಇಂಡಿಯಾ: ನ್ಯಾಯಾಲಯವು ತನ್ನ ತೀರ್ಪಿನಲ್ಲಿ "ಆರ್ಟಿಕಲ್ 16(4) ರ ಅಡಿಯಲ್ಲಿ ಹಿಂದುಳಿದ ವರ್ಗಗಳನ್ನು ಆರ್ಥಿಕ ಮಾನದಂಡಗಳ ಆಧಾರದ ಮೇಲೆ ಗುರುತಿಸಲಾಗುವುದಿಲ್ಲ ಆದರೆ ಜಾತಿ ವ್ಯವಸ್ಥೆಯನ್ನು ಸಹ ಪರಿಗಣಿಸಬೇಕಾಗಿದೆ" ಎಂದು ಹೇಳಿದೆ. ಅಲ್ಲದೆ ಕೆನೆಪದರ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ಹಿಂದುಳಿದ ವರ್ಗಗಳನ್ನು ಗುರುತಿಸುವಾಗ ಅಂತಹ ಕೆನೆಪದರವನ್ನು ಹೊರಗಿಡುವಂತೆ ನಿರ್ದೇಶನ ನೀಡಲಾಯಿತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ