ನವದೆಹಲಿ: ಭಾರತೀಯ ಜನತಾ ಪಕ್ಷದ 'ಅಚ್ಚೇ ದಿನ್' ಹೇಳಿಕೆಯನ್ನು ಲೇವಡಿ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಅಚ್ಚೇ ದಿನ್ ಪ್ರಣಾಳಿಕೆಯನ್ನು ಬಿಜೆಪಿ ಚುನಾವಣೆ ಆದ್ಮೇಲೆ ಬಿಡುಗಡೆ ಮಾಡುತ್ತಾ? ಎಂದು ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಅಖಿಲೇಶ್, "ಪ್ರಧಾನಿಯವರ 'ಅಚ್ಚೇ ದಿನ್' ಚುನಾವಣಾ ಪ್ರಣಾಳಿಕೆ ಚುನಾವಣೆ ಆದ ಮೇಲೆ ಬಿಡುಗಡೆ ಆಗುತ್ತಾ? ಈ ಬಾರಿ ಬಿಜೆಪಿ ಕಾರ್ಯಕರ್ತರೇ ಅಚ್ಚೇ ದಿನ್ ಆನೇ ವಾಲ ಹೇ(ಒಳ್ಳೆಯ ದಿನ ಬರಲಿದೆ) ಎಂದು ಒಬ್ಬರು ಮತ್ತೊಬ್ಬರಿಗೆ ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಇನ್ನು, ದೇಶದ ಜನತೆಗೆ ಹೇಗೆ ಹೇಳುತ್ತಾರೆ? ಬಿಜೆಪಿಯ ಕ್ಷಣಗಣನೆ ಆರಂಭವಾಗಿದೆ" ಎಂದು ಹೇಳಿದ್ದಾರೆ.



ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಅಖಿಲೇಶ್ ಯಾದವ್ #VikasPoochhRahaHai ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿದ್ದಾರೆ. ಸದ್ಯ ಈ ಹ್ಯಾಶ್ ಟ್ಯಾಗ್ ವೈರಲ್ ಆಗಿದೆ.