ಪೂರ್ವ ಗೋದಾವರಿ: ಶನಿವಾರದಂದು ಇತ್ತೀಚಿಗೆ ಕಳುವಾಗಿದ್ದ ನಂದಿ ವಿಗ್ರಹ ಪತ್ತೆಯಾಗಿದ್ದು, ಈಗ ಈ ಘಟನೆಗೆ ಸಂಬಂಧಿಸಿದಂತೆ 7 ಜನರನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಬಾಲಾ ತ್ರಿಪುರ ಸುಂದರಿ ಸಮೇತ ಅಗಸ್ಥೆಶ್ವರ್ ಸ್ವಾಮಿ ರಾಮಚಂದ್ರಪುರಂ ದೇವಾಲಯದಲ್ಲಿದ್ದ ನಂದಿ ವಿಗ್ರಹದಲ್ಲಿ ವಜ್ರಗಳಿವೆ ಎಂದು ಜನವರಿ 23 ರಂದು ಕಳ್ಳತನ ಮಾಡಿದ್ದಾರೆ, ಆದರೆ ಈ ಘಟನೆ ನಡೆದ ನಂತರ ವಿಗ್ರಹ ಐವತ್ತು ಕಿಲೋಮೀಟರ್ ದೂರದಲ್ಲಿ ದುರ್ವ್ಯವಸ್ಥೆ ರೂಪದಲ್ಲಿ ಕಂಡುಬಂದಿದೆ.


ಈ ಘಟನೆ ಕುರಿತಾಗಿ ಮಾತನಾಡಿರುವ ಸಬ್ ಇನ್ಸ್ಪೆಕ್ಟರ್ ಎಸ್ ಲಕ್ಷ್ಮಿ ಕಾಂತಮ್ "ಆರೋಪಿಗಳು ತಿಳಿಸಿರುವಂತೆ ಕಳವು ಸಾಧುಗಳು ಇದರಲ್ಲಿ ಡೈಮಂಡ್ ಮೂರ್ತಿ ಗಳಿವೆ ಎಂದು ಹೇಳಿದ್ದರು, ಅದಕ್ಕೆ ಈ ಮೂರ್ತಿಯನ್ನು ಕಳ್ಳತನ ಮಾಡಿದ್ದರು ಎನ್ನಲಾಗಿದೆ" ಎಂದು ತಿಳಿಸಿದ್ದಾರೆ. ಈಗ ಪೊಲೀಸರು ಆರೋಪಿಗಳನ್ನು ಬಂಧಿಸಿ ಐಪಿಸಿ ಸೆಕ್ಷನ್ 380ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.