ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುರುವಾರ ಗುರುವಾರ ಸಂಜೆ 05:05 ಗಂಟೆಗೆ ಅವರು ದೆಹಲಿಯಲ್ಲಿ ಎಐಐಎಂಎಸ್ ನಲ್ಲಿ ಕೊನೆಯುಸಿರೆಳೆದರು. ಅಟಲ್ ಇನ್ನು ನೆನಪು ಮಾತ್ರ. ದೇಶಕ್ಕೆ ಅವರು ನೀಡಿದ ಕೊಡುಗೆ ಅಪಾರ. ದೆಹಲಿ ಮೆಟ್ರೋ ಕೂಡ ವಾಜಪೇಯಿ ಅವರ ಕೊಡುಗೆ. 


COMMERCIAL BREAK
SCROLL TO CONTINUE READING

2002 ರಲ್ಲಿ, ಮೊದಲ ಕಾರಿಡಾರ್ ಉದ್ಘಾಟನೆ
ದೆಹಲಿ ಮೆಟ್ರೊ ದೈನಂದಿನ ಪ್ರಯಾಣಿಕರಲ್ಲಿ 25 ಲಕ್ಷಕ್ಕೂ ಅಧಿಕ ಜನರಿಗೆ ಈ ರೈಲ್ವೆ ಜಾಲವನ್ನು ರೆಡ್ ಲೈನ್ನ 8.2 ಕಿ.ಮೀ. ವಿಸ್ತಾರದಿಂದ ಮೊದಲಿಗೆ ಪ್ರಾರಂಭಿಸಲಾಗಿದೆಯೆಂದು ತಿಳಿದಿರುವುದಿಲ್ಲ. ಆ ಸಮಯದಲ್ಲಿ ಅದನ್ನು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಉದ್ಘಾಟಿಸಿದ್ದರು. 2002 ರ ಡಿಸೆಂಬರ್ 24 ರಂದು ದೆಹಲಿ ಮೆಟ್ರೊ ರೈಲ್ವೆ ಕಾರ್ಪೋರೇಶನ್(ಡಿಎಂಆರ್ಸಿ)  ದೆಹಲಿಯ ದೊಡ್ಡ ಕನಸಿನ ಮೊದಲ ಕಾರಿಡಾರ್ ಅನ್ನು ವಾಜಪೇಯಿ ಉದ್ಘಾಟಿಸಿದರು.


ಈ ಉದ್ಘಾಟನಾ ಸಮಾರಂಭದಲ್ಲಿ ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ಉಪ ಪ್ರಧಾನ ಮಂತ್ರಿ ಎಲ್.ಕೆ.ಅಡ್ವಾಣಿ, ಕೇಂದ್ರ ನಗರಾಭಿವೃದ್ಧಿ ಸಚಿವ ಅನಂತ್ ಕುಮಾರ್, ಡಿಎಂಆರ್ಸಿ ಮುಖ್ಯಸ್ಥ ಇ. ಶ್ರೀಧರನ್ ಮತ್ತು ಮೆಟ್ರೊ ಅಧ್ಯಕ್ಷ ಮದನ್ ಲಾಲ್ ಖುರಾನಾ ಉಪಸ್ಥಿತರಿದ್ದರು.


ಸರತಿ ಸಾಲಿನಲ್ಲಿ ನಿಂತು ಟೋಕನ್ ಖರೀದಿಸಿದ ಅಪರೂಪದ ನಾಯಕ
ವಾಜಪೇಯಿ ತನ್ನ ಸ್ವಂತ ಹಣವನ್ನು ಪಾವತಿಸುವ ಮೂಲಕ ಕಾಶ್ಮೀರಿ ಗೇಟ್ ಮೆಟ್ರೋ ನಿಲ್ದಾಣದಿಂದ ದೆಹಲಿ ಮೆಟ್ರೋ ನಿಲ್ದಾಣಕ್ಕೆ ಮೊದಲ ಪ್ರಯಾಣಿಕ ಟೋಕನ್ ಅನ್ನು ಖರೀದಿಸಿದ್ದಾರೆ. ಅದುವೇ ಕಾರ್ಯಕ್ರಮದ ಮುಖ್ಯ ಅತಿಥಿ ಮತ್ತು ದೇಶದ ಪ್ರಧಾನ ಮಂತ್ರಿಯಾಗಿದ್ದರೂ, ಅಟಲ್ ಬಿಹಾರಿ ವಾಜಪೇಯಿ ಸ್ವತಃ ಹಣದಿಂದ ಮೆಟ್ರೋದ ಮೊದಲ  ಟೋಕನ್ ಅನ್ನು ಖರೀದಿಸಿ ಪ್ರಯಾಣ ಮಾಡಿದ್ದರು.


ಆಗಿನ ಪ್ರಧಾನ ಮಂತ್ರಿಯು ಅಧಿಕೃತವಾಗಿ ರೈಲು ಸೇವೆಯನ್ನು ಫ್ಲ್ಯಾಗ್ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ನಂತರ ವಾಜಪೇಯಿ ಮತ್ತು ಇತರ ಅತಿಥಿಗಳು ಮೆಟ್ರೋ ರೈಲಿನಲ್ಲಿ ಕಾಶ್ಮೀರಿ ಗೇಟ್ ನಿಂದ ಪ್ರಯಾಣಿಸಿ ಸೀಲಂಪುರಿ ನಲ್ಲಿ ಇಳಿದಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.