ನವದೆಹಲಿ: ಕರ್ನಾಟಕ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಮೇಲಿನ ಮಾರಣಾಂತಿಕ ಹಲ್ಲೆಯು ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿರುವುದನ್ನು ಸೂಚಿಸುತ್ತದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ನವದೆಹಲಿಯಲ್ಲಿ ಲೋಕಾಯುಕ್ತರ ಮೇಲಿನ ಹಲ್ಲೆಯ ವಿಚಾರವಾಗಿ ಪ್ರತಿಕ್ರಯಿಸಿರುವ ಅನಂತ್ ಕುಮಾರ್, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿದು ಹೋಗಿರುವುದಕ್ಕೆ ಈ ಘಟನೆಯೇ ಸಾಕ್ಷಿ ಎಂದರು.


ಈ ಹಿಂದೆ ರಾಜ್ಯದಲ್ಲಿ ಈ ಹಿಂದೆಯೂ ಹಲವು ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ, ಪ್ರಮಾಣಿಕ ಐಎಎಸ್, ಡಿವೈಎಸ್ಪಿ ಅಧಿಕಾರಿಗಳ ನಿಗೂಢವಾಗಿ ಸಾವನಪ್ಪಿದ್ದಾರೆ. 


ಇಂತಹ ಘಟನೆಗಳು ಪ್ರಮುಖವಾಗಿ ಅಪರಾಧಿಗಳನ್ನು ರಾಜ್ಯದಲ್ಲಿ ಸ್ವಚ್ಛಂದವಾಗಿ ಬಿಟ್ಟಿರುವುದಕ್ಕೆ ಈ ಘಟನೆಗಳು ಸಂಭವಿಸಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಬೇಗನೆ ಗುಣಮುಖರಾಗಲಿ ಎಂದು ಅನಂತಕುಮಾರ್ ಹಾರೈಸಿದರು.