ನವದೆಹಲಿ: ಯುಪಿಎ ಸರ್ಕಾರದಲ್ಲಿ ನಂದನ್ ನೀಲಕೇಣಿಯವರ ಕಲ್ಪನೆಯಲ್ಲಿ ಮೂಡಿ ಬಂದಂತಹ ಮಹತ್ವದ ಆಧಾರ್ ಯೋಜನೆಗೆ ಜಗತ್ತಿನ ಶ್ರೀಮಂತ್ ವ್ಯಕ್ತಿ ಬಿಲ್ ಗೇಟ್ಸ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



COMMERCIAL BREAK
SCROLL TO CONTINUE READING

ಈ ಯೋಜನೆಯ ಕುರಿತಾದ ತಮ್ಮ ಬರಹವೊಂದನ್ನು ಈಗ ಬಿಲ್ ಗೇಟ್ಸ್  ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ."2009 ರಲ್ಲಿ ನನ್ನ ಸ್ನೇಹಿತ ನಂದನ್ ನೀಲಕೇಣಿ ಭಾರತ ಸರ್ಕಾರದ ಮೂಲಕ ಡಿಜಿಟಲ್ ಗುರುತು ವ್ಯವಸ್ಥೆಯೊಂದನ್ನು ಜಾರಿಗೆ ತಂದರ.ಇದು ದಶಕದ ನಂತರ ಸುಮಾರು 1.3 ಬಿಲಿಯನ್ ಜನರು ಈ ಕಾರ್ಯಕ್ರಮದಲ್ಲಿ ನೊಂದಣಿಯಾಗಿದ್ದಾರೆ" ಎಂದು ಟ್ವೀಟ್ ಮಾಡಿಕೊಂಡಿದ್ದಾರೆ. ಈ ಯೋಜನೆಯ್ ಕುರಿತಾಗಿ ವಿಸ್ತೃತ ಬರಹವನ್ನು Making the world’s invisible people, visible ಎನ್ನುವ ಶೀರ್ಷಿಕೆಯಡಿಯಲ್ಲಿ ಬರೆದಿದ್ದಾರೆ.


ಕಳೆದ  ಒಂದು ದಶಕದಿಂದ ನಂದನ್ ನೀಲಕಣಿ ಈ ಅದೃಶ್ಯ ಜನರನ್ನು ಗುರುತಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.