ವಿಜಯವಾಡ: ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ಬಿಸ್ವಾಭೂಷಣ್ ಹರಿಚಂದನ್ ಬುಧವಾರ ಅಧಿಕಾರ ವಹಿಸಿಕೊಂಡರು. ರಾಜ್ಯದ ಉಚ್ಚ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸಿ.ಪ್ರವೀಣ್ ಕುಮಾರ್ ನೂತನ ರಾಜ್ಯಪಾಲರಿಗೆ ಪ್ರಮಾಣವಚನ ಬೋಧಿಸಿದರು.


COMMERCIAL BREAK
SCROLL TO CONTINUE READING

ರಾಜ್ ಭವನದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ, ಅವರ ಕ್ಯಾಬಿನೆಟ್ ಸದಸ್ಯರು, ರಾಜ್ಯ ವಿಧಾನಸಭಾ ಸ್ಪೀಕರ್ ತಮ್ಮಿನೆನಿ ಸೀತಾರಾಮ್, ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಮತ್ತು ಇತರ ಗಣ್ಯರು ಹಾಜರಿದ್ದರು.


ಇಂದು ನೂತನ ರಾಜ್ಯಪಾಲರ ಪ್ರಮಾಣವಚನ ಸಮಾರಂಭದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ವಿಧಾನಸಭೆಯನ್ನು ಮಧ್ಯಾಹ್ನ 1 ಗಂಟೆಯವರೆಗೆ ಮುಂದೂಡಲಾಯಿತು. ಸದನದಲ್ಲಿ ಪ್ರಶ್ನಾವಳಿ ಚರ್ಚೆ ಮುಗಿದ ಬಳಿಕ ಸದನವನ್ನು ಮುಂದೂಡಲಾಯಿತು. ಅದಕ್ಕೂ ಮೊದಲು ಸದನಕ್ಕೆ ಆಗಮಿಸಿದ ಟಿಡಿಪಿ ಶಾಸಕರು ಚಂದ್ರಬಾಬು ನಾಯ್ಡು ಅವರಿಗೆ ಸದನದಲ್ಲಿ ಮಾತನಾಡಲು ಅವಕಾಶ ಕೋರಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಸ್ಪೀಕರ್ ತಮ್ಮಿನೆನಿ ಸೀತಾರಾಮ್ ಅವರ ಬೇಡಿಕೆಗೆ ಮನ್ನಣೆ ನೀಡದ ಕಾರಣ, ವಿರೋಧ ಪಕ್ಷದ ನಾಯಕರು ಸದನದಿಂದ ಹೊರನಡೆದರು. 


ಮಂಗಳವಾರ, ನಾಯ್ಡು ಮತ್ತು ಅವರ ಪಕ್ಷದ ಶಾಸಕರು ಸದನದ ನಡಾವಳಿಗೆ ಅಡ್ಡಿಪಡಿಸಿದರು ಎಂಬ ಆರೋಪದ ಮೇಲೆ ತನ್ನ ಮೂವರು ಸದಸ್ಯರನ್ನು ಅಮಾನತುಗೊಳಿಸುವ ಕ್ರಮವನ್ನು ವಿರೋಧಿಸಿದ ನಾಯ್ಡು, ಟಿಡಿಪಿ ಶಾಸಕರು ಮತ್ತು ಎಂಎಲ್ಸಿಗಳೊಂದಿಗೆ ಆಂಧ್ರಪ್ರದೇಶದ ವಿಧಾನಸಭೆ ಕಾರಿಡಾರ್ನಲ್ಲಿ ಪ್ರತಿಭಟನೆ ನಡೆಸಿ, ತಮ್ಮ ಪಕ್ಷದ ಮೂವರು ಶಾಸಕರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ, ದಿನದ ನಡಾವಳಿ ಪ್ರಾರಂಭವಾಗುವ ಮುನ್ನವೇ ಟಿಡಿಪಿ ಶಾಸಕರು ಸದನದಿಂದ ಹೊರ ಬಂದರು.


ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮಹಿಳೆಯರಿಗೆ ಪಿಂಚಣಿ ನೀಡುವ ಬಗ್ಗೆ ಸರ್ಕಾರದ ಪ್ರತಿಕ್ರಿಯೆಯನ್ನು ವಿರೋಧಿಸಿ ಸ್ಪೀಕರ್ ಕುರ್ಚಿಯನ್ನು ಸುತ್ತುವರೆದಿದ್ದರಿಂದ ಶಾಸಕಾಂಗ ವ್ಯವಹಾರಗಳ ಸಚಿವ ಬುಗ್ಗನಾ ರಾಜೇಂದ್ರನಾಥ್ ಅವರ ವಿರುದ್ಧ ನಿರ್ಣಯ ಮಂಡಿಸಿದ ನಂತರ ಈ ಮೂವರನ್ನು ಅಮಾನತುಗೊಳಿಸಲಾಗಿದೆ. ಅಮಾನತುಗೊಂಡ ಮೂವರು ಸದಸ್ಯರಲ್ಲಿ ಕೆ. ಅಚನ್ನೈಡು, ಗೊರಾಂಟ್ಲಾ ಬುಟ್ಚಯ್ಯ ಚೌದರಿ ಮತ್ತು ನಿಮ್ಮಲಾ ರಾಮನೈಡು ಸೇರಿದ್ದಾರೆ.