ತಿರುವನಂತಪುರಂ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಕೇರಳದ ಕಚೇರಿಗೆ ಬಿಜೆಪಿ ಕಾರ್ಯಕರ್ತರು ನುಗ್ಗಿ ದಾಳಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

 ಶಶಿ ತರೂರ್ ಇತ್ತಿಚೆಗೆ ಬಿಜೆಪಿ 2019 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದದ್ದೆ ಆದಲ್ಲಿ ಅದು ಹಿಂದೂ ಪಾಕಿಸ್ತಾನ್ ಆಗಲಿದೆ ಎಂದು ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಬಿಜೆಪಿ ತೀವ್ರವಾದ ಆಕ್ಷೇಪವನ್ನು ವ್ಯಕ್ತಪಡಿಸಿತ್ತು. ಈಗ ಈ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಯುವ ಕಾರ್ಯಕರ್ತರು ಕೇರಳದಲ್ಲಿರುವ ಆಫಿಸ್ ಗೆ ದಾಳಿ ಮಾಡಿ ಕಪ್ಪು ಮಸಿ ಬಳೆದಿದ್ದಾರೆ.


ಈ ದಾಳಿಯನ್ನು ಖಂಡಿಸಿರುವ ಶಶಿ ತರೂರ್ " ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಇಲ್ಲಿಗೆ ಬಂದಿರುತ್ತಾರೆ ಆದರೆ ನೀವು ಅವರನ್ನು ಇಲ್ಲಿಂದ ಹೆದರಿ ಹೋಗುವ ಹಾಗೆ ಮಾಡಿದ್ದಿರಿ. ಇದೆಲ್ಲ ನಮ್ಮ ದೇಶಕ್ಕೆ ಬೇಕಾಗಿದೆಯಾ? ಇದನ್ನು ನಾನು ಈ ದೇಶದ ಪ್ರಜೆಯಾಗಿ ಕೇಳುತ್ತಿದ್ದೇನೆ ಹೊರತು ಸಂಸದನಾಗಿ ಅಲ್ಲ.ಇದು ನಾನು ತಿಳಿದಿರುವ ಹಿಂದು ಧರ್ಮವಲ್ಲ ಎಂದು ಅವರು ತಿಳಿಸಿದರು.


ಈ ಘಟನೆ ನಡೆದಾಗ ಶಶಿ ತರೂರ್ ಆಫೀಸ್ ನಲ್ಲಿ ಇದ್ದಿರಲಿಲ್ಲ. ಆ ಸಂದರ್ಭದಲ್ಲಿ ಅವರು ಶಶಿ ತರೂರ್ ವಿರುದ್ದ ಘೋಷಣೆಗಳನ್ನು ಕೂಗಿದ್ದಲ್ಲದೆ ಹಿಂದೂ ಪಾಕಿಸ್ತಾನ್ ಬ್ಯಾನರ್ ನ್ನು ಆಫಿಸ್ ಗೆ ನೇತು ಹಾಕುವ ಪ್ರಯತ್ನವನ್ನು ಬಿಜೆಪಿ ಕಾರ್ಯಕರ್ತರು ಮಾಡಿದ್ದರು ಎಂದು ತಿಳಿದುಬಂದಿದೆ.