ನವದೆಹಲಿ: ಏಪ್ರಿಲ್ 2 ರಂದು ದಲಿತ ಸಂಘಟನೆಗಳು ಕರೆಕೊಟ್ಟಿದ್ದ  'ಭಾರತ ಬಂದ್' ಗೆ ಸಿಕ್ಕಿರುವ ಪ್ರತಿಕ್ರಿಯೆ ಕಂಡು ಬಿಜೆಪಿ ಹೆದರಿ ದೇಶಾದ್ಯಂತ ದಲಿತರ ಮೇಲೆ ಹಲ್ಲೆ ಮಾಡುತ್ತಿದೆ ಎಂದು  ಬಿಎಸ್ಪಿ ನಾಯಕಿ ಮಾಯಾವತಿ ತಿಳಿಸಿದರು.


COMMERCIAL BREAK
SCROLL TO CONTINUE READING

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ  ದಲಿತ ಸಂಘಟನೆಗಳ ನಾಯಕರು ಮತ್ತು ಅವರ ಕುಟುಂಬ ಸದಸ್ಯರನ್ನು ಅದು ಬಂಧಿಸುತ್ತಿದೆ ಎಂದರು. ಮೋದಿ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ಮಾಡಿದ ಮಾಯಾವತಿ "ಸದ್ಯ ದಲಿತರು ಪ್ರತಿಭಟನೆಯನ್ನೇ ಮಾಡದ ಹಾಗೆ ಸನ್ನಿವೇಶವನ್ನು ಸೃಷ್ಟಿಸಲಾಗಿದೆ,ಪ್ರತಿಭಟನೆ ಮಾಡುವರನ್ನು ಟಾರ್ಗೆಟ್ ಮಾಡಲಾಗುತ್ತಿದೆ,ವಿಡಿಯೋ ಕ್ಲಿಪ್ ಗಳನ್ನೂ ನೋಡಿದಾಗ ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂಬುದು ತಿಳಿಯುತ್ತದೆ  ಎಂದು ಆರೋಪಿಸಿದರು.


ಎಸ್ಸಿ ಎಸ್ಟಿ ಕಾಯ್ದೆಯನ್ನು ತಿರುಚುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಮಾಯಾವತಿ "ಬಿಜೆಪಿ ಯು ದಲಿತರ ಪ್ರತಿಭಟನೆಗೆ ಹೆದರಿದೆ ಈಗ ಅವರಿಗೆ ಅಧಿಕಾರ ತಮ್ಮ ಕೈ ತಪ್ಪಿ ಹೋಗಬಹುದೆಂದು ಮನವರಿಕೆಯಾಗಿದೆ" ಎಂದು ತಿಳಿಸಿದರು.ಆದ್ದರಿಂದ ದಲಿತರ ವಿಷಯದಲ್ಲಿ ಆಟವಾಡುವುದನ್ನು ಬಿಜೆಪಿ ಬಿಡಬೇಕು ಎಂದು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.