ನವದೆಹಲಿ: ಈಗ ಉತ್ತರಪ್ರದೇಶದ ಬಲ್ಲಿಯಾ ಕ್ಷೇತ್ರದ ಬಿಜೆಪಿ ಶಾಸಕನಾಗಿರುವ ಸುರೇಂದ್ರ ಸಿಂಗ್ ಪ್ರಧಾನಿ ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಗೌತಮ್ ಬುದ್ದ ಹಾಗೂ ಮಹಾವೀರನಿಗೆ ಹೋಲಿಸಿದ್ದಾರೆ.


COMMERCIAL BREAK
SCROLL TO CONTINUE READING

"ಜಗತ್ತಿಗೆ ಹೊಸ ಮಾರ್ಗ ತೋರಿಸಿದ ಗೌತಮ್ ಬುದ್ಧ ಮಹಾವೀರ್, ಹಾಗೂ ನರೇಂದ್ರ ಮೋದಿ ಅವರು ಇಡೀ ಜಗತ್ತನ್ನು ತಮ್ಮ ಕುಟುಂಬ ಎಂದು ತಿಳಿದವರು ,ಅಂತಹ ಮಹಾನ್ ಪುರುಷರು ಜನ್ಮ ತಾಳುವುದು ಅಪರೂಪ" ಎಂದು ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ. 


ಸುರೇಂದ್ರ ಸಿಂಗ್ ರ ಈ ಪ್ರಮುಖವಾಗಿ ಪ್ರಧಾನಿ ಮೋದಿ ಬಗ್ಗೆ ಟೀಕಿಸಿದ ಅಜಿತ್ ಸಿಂಗ್ ಅವರ ಹೇಳಿಕೆ ನಂತರ ಬಂದಿದೆ. ಬುಧುವಾರ ಅಜಿತ್ ಸಿಂಗ್ ರ್ಯಾಲಿಯಲ್ಲಿ ಮಾತನಾಡುತ್ತಾ " ಪ್ರಧಾನಿ ಮೋದಿ  ಸುಳ್ಳೇ ಹೇಳಿಲ್ಲವೆಂದು ಹೇಳುತ್ತಾರೆ,ಆದರೆ ಇದುವರೆಗೆ ಎಂದಾದರು ಅವರು ಸತ್ಯ ಹೇಳಿದ್ದಾರೆಯೇ?. ಮಕ್ಕಳು ಸತ್ಯ ಹೇಳಬೇಕೆಂದು ಪೋಷಕರ ಕಳಿಸಿಕೊಡುತ್ತಾರೆ ಆದರೆ ಮೋದಿಯವರೆಗೆ ಸತ್ಯ ಹೇಳುವುದನ್ನೇ ಕಲಿಸಿಲ್ಲ. ಮಹಿಳೆಯರ ಹಕ್ಕುಗಳ ರಕ್ಷಕ ಎಂದು ಹೇಳುತ್ತಾರೆ.ಆದರೆ ಇದುವರೆಗೆ ಪತ್ನಿಗೆ ಅವರು ಒಂದೇ ಒಂದು ಸಾರಿ ತಲಾಖ್ ಹೇಳದೆ ಪತ್ನಿಯನ್ನು ತೊರೆದಿದ್ದಾರೆ" ಎಂದು ಅಜಿತ್ ಸಿಂಗ್ ವ್ಯಂಗ್ಯವಾಡಿದ್ದರು.


ಸುರೇಂದ್ರ ಸಿಂಗ್ ಇದಕ್ಕೆ ಪ್ರತಿಕ್ರಿಯಿಸುತ್ತಾ ಇಡೀ ಜಗತ್ತನ್ನೇ ಕುಟುಂಬ ಎಂದು ತಿಳಿದಾಗ ಅಲ್ಲಿ ಸ್ವಂತ ಹೆಂಡತಿ ಹಾಗೂ ಕುಟುಂಬ ಅಂತಾ ಬರುವುದಿಲ್ಲವೆಂದು ಹೇಳಿದರು.