ಬಿಹಾರದಲ್ಲಿ ದೋಣಿ ದುರಂತ: 2 ಜನರ ದುರ್ಮರಣ, 10ಕ್ಕೂ ಅಧಿಕ ಮಂದಿ ನಾಪತ್ತೆ
ಗುರುವಾರ ರಾತ್ರಿ ಮಹಾನಂದ್ ನದಿಯಲ್ಲಿ ಏರ್ಪಡಿಸಿದ್ದ ದೋಣಿ ಸ್ಪರ್ಧೆಯಲ್ಲಿ ಭಾಗವಹಿಸಲು ಸುಮಾರು 40 ರಿಂದ 50 ಪ್ರಯಾಣಿಕರು ಜಗದೀಶ್ಪುರ ಜೆಟ್ಟಿಯಿಂದ ಬಿಹಾರಕ್ಕೆ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಮಾಲ್ಡಾ: ಬಿಹಾರದ ಕತಿಹಾರ್ ಪ್ರದೇಶದಲ್ಲಿರುವ ಜಗದೀಶ್ಪುರದ ಮಹಾನಂದ್ ನದಿಯಲ್ಲಿ ದೋಣಿ ಮುಳುಗಿ 2 ಜನ ಸಾವನ್ನಪ್ಪಿದ್ದು, 10ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.
ಗುರುವಾರ ರಾತ್ರಿ ಮಹಾನಂದ್ ನದಿಯಲ್ಲಿ ಏರ್ಪಡಿಸಿದ್ದ ದೋಣಿ ಸ್ಪರ್ಧೆಯಲ್ಲಿ ಭಾಗವಹಿಸಲು ಸುಮಾರು 40 ರಿಂದ 50 ಪ್ರಯಾಣಿಕರು ಜಗದೀಶ್ಪುರ ಜೆಟ್ಟಿಯಿಂದ ಬಿಹಾರಕ್ಕೆ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಕೂಡಲೇ ಸ್ಥಳಕ್ಕಾಗಮಿಸಿದ ಎನ್ಡಿಆರ್ಎಫ್ ತಂಡ ಮತ್ತು ಜಿಲ್ಲಾ ಪೊಲೀಸರು ನೀರಿನಲ್ಲಿ ಮುಳುಗಿರುವವರ ರಕ್ಷಣಾ ಕಾರ್ಯಚರಣೆಯಲ್ಲಿ ನಿರತರಾಗಿದ್ದಾರೆ. ಇದುವರೆಗೆ 7 ಮಂದಿ ಶವವನ್ನು ಹೊರತೆಗೆಯಲಾಗಿದ್ದು, 28 ಜನರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.