ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣಾವಧಿ ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಉದ್ಘಾಟನಾ ಭಾಷಣದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀತಿಯೊಂದಿಗೆ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ತಿಳಿಸಿದರು. ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಯುವಜನರಿಗೆ ಉದ್ಯೋಗ ಪಡೆಯಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಿಳಿಸಿದ ಜೇಟ್ಲಿ ದೇಶದ ಕೃಷಿ ಉತ್ಪಾದನೆಯು ದಾಖಲೆ ಮಟ್ಟದಲ್ಲಿದೆ ಎಂದು ಉಲ್ಲೇಖಿಸಿದರು. 


COMMERCIAL BREAK
SCROLL TO CONTINUE READING

ಹಣಕಾಸು ಸಚಿವ ಅರುಣ್ ಜೇಟ್ಲಿಯ ಆರಂಭಿಕ ಭಾಷಣದ ಕೆಲವು ಪ್ರಮುಖ ಅಂಶಗಳು


  • ಪ್ರಧಾನಿ ನರೇಂದ್ರ ಮೋದಿಯ ನೇತೃತ್ವದಲ್ಲಿ ಹಲವು ಮೂಲಭೂತ ಸುಧಾರಣೆಗಳು ನಡೆದಿವೆ.

  • ಮೋದಿ ಸರ್ಕಾರದ ಯೋಜನೆಗಳಿಂದ ವಿದೇಶಿ ಹೂಡಿಕೆ ಹೆಚ್ಚಾಗಿದೆ.

  • ಇಂದು ಯುವಕರು ದೇಶದಲ್ಲಿ ಪ್ರಾಮಾಣಿಕವಾಗಿ ಜೀವಿಸುತ್ತಿದ್ದಾರೆ.

  • ಬಡತನವನ್ನು ತೆಗೆದುಹಾಕುವ ಮೂಲಕ ನಾವು ಬಲವಾದ ಭಾರತವನ್ನು ನಿರ್ಮಿಸುತ್ತೇವೆ.

  • ಭಾರತವು ವಿಶ್ವದಲ್ಲೇ ಐದನೇ ದೊಡ್ಡ ಆರ್ಥಿಕ ವ್ಯವಸ್ಥೆಯಾಗಿದೆ.

  • ಸರ್ಕಾರದ ಸುಧಾರಣೆಗಳಿಂದ ಆರ್ಥಿಕತೆಯು ತ್ವರಿತವಾಗಿ ಸುಧಾರಿಸಿದೆ.

  • ಸರ್ಕಾರವು GST ಯಲ್ಲಿ ಹಲವಾರು ಸುಧಾರಣೆಗಳನ್ನು ಮಾಡುತ್ತಿದೆ.

  • ನಮ್ಮ ಸರ್ಕಾರವು ಮಧ್ಯಮ ವರ್ಗದ ಜನರ ಜೀವನವನ್ನು ಸುಲಭಗೊಳಿಸುತ್ತದೆ.

  • ಅದೃಷ್ಟವಶಾತ್, ವಿದ್ಯುತ್ 40 ದಶಲಕ್ಷ ಮನೆಗಳನ್ನು ತಲುಪಿದೆ.

  • ನಾವು ಅನಗತ್ಯ ನಿಯಮಗಳನ್ನು ತೊಡೆದುಹಾಕಿದ್ದೇವೆ.

  • ಗೃಹ ಸಾಲದಲ್ಲಿ ಜನರಿಗೆ ಬಹಳಷ್ಟು ಪರಿಹಾರ ನೀಡಲಾಗಿದೆ.

  • ದೇಶದ ಕೃಷಿ ಉತ್ಪಾದನೆಯು ದಾಖಲೆ ಮಟ್ಟದಲ್ಲಿದೆ.