ಮಧುರೈ: ದೇಶದಲ್ಲಿ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ 2019 ರ ಚುನಾವಣೆಯಲ್ಲಿ ಯಾರು ವಿಜಯ ಸಾಧಿಸುತ್ತಾರೆ, ಮುಂದಿನ ಪ್ರಧಾನಮಂತ್ರಿ ಯಾರಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ದೇಶದಲ್ಲಿ ಪ್ರಸ್ತುತ ರಾಜಕೀಯ ಪರಿಸ್ಥಿತಿ ಜಟಿಲವಾಗಿದೆ. 2019 ರಲ್ಲಿ ಯಾರು ದೇಶವನ್ನು ಮುನ್ನಡೆಸುತ್ತಾರೆ ಎಂದು ಹೇಳಲಾಗದು? ಆದರೆ ಹೋರಾಟ ಬಹಳ ರೋಮಾಂಚನಕಾರಿಯಾಗಿರುವುದು ಖಚಿತ. ನಾನು ರಾಜಕೀಯದಲ್ಲಿ ಕೇಂದ್ರೀಕರಿಸುತ್ತಿಲ್ಲ. ನನ್ನ ವೈಯಕ್ತಿಕ ದೃಷ್ಟಿ ಸ್ವತಂತ್ರ ಮತ್ತು ಎಲ್ಲಾ ಪಕ್ಷ. ನಾನು ಯಾವುದೇ ವ್ಯಕ್ತಿ ಅಥವಾ ಯಾವುದೇ ಪಕ್ಷದ ಪರ-ವಿರೋಧ ಪ್ರಚಾರ ಮಾಡುವುದಿಲ್ಲ ಎಂದು ಬಾಬಾ ರಾಮದೇವ್ ತಮಿಳುನಾಡಿನ ಮಧುರೈನಲ್ಲಿ ಹೇಳಿದರು.


ನಮಗೆ ರಾಜಕೀಯ ಅಥವಾ ಧಾರ್ಮಿಕ ಉದ್ದೇಶದ ದೇಶ ಬೇಕಿಲ್ಲ. ನಮಗೆ ಬೇಕಿರುವುದು ಆಧ್ಯಾತ್ಮಿಕ ದೇಶ ಮತ್ತು ಆಧ್ಯಾತ್ಮಿಕ ಜಗತ್ತು. ಯೋಗ ಮತ್ತು ವೈದಿಕ ಆಚರಣೆಗಳಿಂದ ನಾವು ದೈವಿಕ, ಸಮೃದ್ಧಿಯ ಮತ್ತು ಆಧ್ಯಾತ್ಮಿಕ ಭಾರತವನ್ನು ನಿರ್ಮಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.