ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ಹೋರಾಡಲು ಬೆಕ್ಕು,ನಾಯಿ,ಹೆಬ್ಬಾತು ಮತ್ತು ಮುಂಗುಸಿಗಳು ಒಂದಾಗಿವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದರು.


COMMERCIAL BREAK
SCROLL TO CONTINUE READING

ಶುಕ್ರವಾರ ಇಲ್ಲಿ ಪಕ್ಷದ 38 ಸ್ಥಾಪನಾ ದಿನದಂದು ಹಮ್ಮಿಕೊಂಡಿದ್ದ ರ್ಯಾಲಿಯನ್ನು ಉದ್ಘಾಟಿಸುತ್ತಾ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಸಂಸತ್ ಸಲಿಸಾಗಿ ನಡೆಯಲು ಕೇಳಿಕೊಂಡರೆ ಅದಕ್ಕೆ ವಿರೋಧಪಕ್ಷಗಳು ಅಡ್ಡಿಪಡಿಸುತ್ತಿವೆ.ಇಂದು ಕೂಡ ಸಂಸತ್ ಮುಂದೂಡಲ್ಪಟ್ಟಿದೆ ಎಂದರು.


ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಮೇಲೆ ಕಿಡಿ ಕಾರಿದ ಅಮಿತ್ ಷಾ "ರಾಹುಲ್ ಗಾಂಧಿ ಕಳೆದ ನಮ್ಮ ನಾಲ್ಕು ವರ್ಷಗಳ ವರದಿಯನ್ನು ಕೇಳುತ್ತಿದ್ದಾರೆ,ಆದರೆ ನಾನು ಅವರಿಗೆ ಹೇಳುತ್ತಿದ್ದೇನೆ ದೇಶವು ನಿಮ್ಮ ಪಕ್ಷ ಕಳೆದ 40 ವರ್ಷಗಳಲ್ಲಿ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ "ಎಂದು ತಿಳಿಸಿದರು.