ಚೆನ್ನೈ: ಭಾರತ ಕಂಡ ದಿಗ್ಗಜ ರಾಜಕಾರಣಿ ಹಾಗೂ ತಮಿಳು ಚಿತ್ರರಂಗದ ಖ್ಯಾತ ಕಥೆಗಾರ, ಸಂಭಾಷಣಾಕಾರ, ಬರಹಗಾರರಾಗಿದ್ದ ತಲೈವಾರ್(ನಾಯಕ) ಎಂದೇ ಖ್ಯಾತಿ ಪಡೆದಿದ್ದ ಕಲೈನಾರ್' ಕರುಣಾನಿಧಿ ಈಗ ನೆನಪು ಮಾತ್ರ. 


COMMERCIAL BREAK
SCROLL TO CONTINUE READING

ಅಗಲಿದ ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ನಿಧನಕ್ಕೆ ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿ ಚಿತ್ರರಂಗ ಸೇರಿದಂತೆ ಬಹುತೇಕ ಎಲ್ಲಾ ಸಿನಿತಾರೆಯರು ಸಂತಾಪ ಸೂಚಿಸಿದ್ದಾರೆ.


ಇಂದು ನನ್ನ ಜೀವನದಲ್ಲೇ ಕರಾಳ ದಿನ. ಕರುಣಾನಿಧಿ ಅವರನ್ನು ಕಳೆದುಕೊಂಡ ಈ ದಿನ ಮರೆಯುವುದಕ್ಕೆ ಸಾಧ್ಯವಿಲ್ಲ. ಅವರ ಆತ್ಮ ಶಾಂತಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಖ್ಯಾತ ನಟ ರಜನೀಕಾಂತ್ ತಮ್ಮ ಸಂತಾಪ ಸೂಚಿಸಿದ್ದಾರೆ.



ತಮಿಳುನಾಡಿಗೆ ಅಪಾರ ಕೊಡುಗೆ ನೀಡಿರುವ ಅತ್ಯದ್ಭುತ ವ್ಯಕ್ತಿತ್ವ ಹೊಂದಿರುವ ನಾಯಕ ಕಲೈನಾರ್ ಕರುಣಾನಿಧಿಯವರನ್ನು ಇಡೀ ದೇಶ ಸದಾ ಸ್ಮರಿಸುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ- ಕಿಚ್ಚ ಸುದೀಪ್



ಒಂದು ತಿಂಗಳ ಹಿಂದೆ ನಾನು ಅವರೊಂದಿಗೆ ತೆಗೆದುಕೊಂಡ ಕಟ್ಟ ಕಡೆಯ ಫೋಟೋ ಇದು. ಇದೇ ನನ್ನ ಮತ್ತು ಅವರ ಕೊನೆಯ ಭೇಟಿ ಎಂದು ನಾನು ಊಹಿಸಲೇ ಇಲ್ಲ. ಅಪ್ಪ ನಿಮ್ಮನ್ನ ಮಿಸ್ ಮಾಡಿಕೊಳ್ಳುವೆ... - ಖುಷ್ಬು ಸುಂದರ್