ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್​ (85) ಅವರ ಅಂತ್ಯ ಕ್ರಿಯೆ ಜಯಮಹಲ್​ ಖುದ್ದುಸ್ ಸಾಹೇಬ್​ನಲ್ಲಿ ಮುಸ್ಲಿಂ ಸಂಪ್ರದಾಯದಂತೆ ನೆರವೇರಿತು. ಮೂರು ಸುತ್ತು ಗುಂಡು ಹಾರಿಸುವ ಮೂಲಕ‌ ಸರ್ಕಾರಿ ಗೌರವ ಸಲ್ಲಿಸಲಾಯಿತು. 


COMMERCIAL BREAK
SCROLL TO CONTINUE READING

ಮುಸ್ಲಿಂ ಸಮಾಜದ ಮುಖಂಡರು, ಎಐಸಿಸಿ ಮುಖಂಡ ಗುಲಾಂ ನಬೀ ಆಜಾದ್, ಸಚಿವ ಯುಟಿ ಖಾದರ್​, ಸಚಿವ ಜಮೀರ್​ ಅಹಮದ್​, ರಿಜ್ವಾನ್​​ ಅರ್ಷದ್​​, ಯಲಹಂಕ ಶಾಸಕ ಎಸ್.​ಆರ್.​ ವಿಶ್ವನಾಥ್​ ಸೇರಿದಂತೆ ಹಲವು ಷರೀಫ್​ ಅಭಿಮಾನಿಗಳು ಉಪಸ್ಥಿತರಿದ್ದರು.


ಇದಕ್ಕೂ ಮೊದಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್​ ಸೇರಿದಂತೆ ಕಾಂಗ್ರೆಸ್​ನ ಹಿರಿಯ ನಾಯಕರು ಷರೀಫ್​ ಪಾರ್ಥಿವ ಶರೀರದ ದರ್ಶನ ಮಾಡಿ ಅಗಲಿದ ನಾಯಕನಿಗೆ ಸಂತಾಪ ಸಲ್ಲಿಸಿದ್ದರು.