ನವದೆಹಲಿ: ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಪಕ್ಷವು ರಾಷ್ಟ್ರವ್ಯಾಪಿ ಆಂದೋಲನಕ್ಕೆ ಕರೆ ನೀಡಿದೆ.


COMMERCIAL BREAK
SCROLL TO CONTINUE READING

ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋಟಾಸರಾ ಅವರು ಟ್ವೀಟ್ ನಲ್ಲಿ, "ನಾಳೆ ಕಾಂಗ್ರೆಸ್ ಕಾರ್ಯಕರ್ತರು 'Save Democracy-Save Constitution' ಆಂದೋಲನ ಕರೆಯ ಭಾಗವಾಗಿ ರಾಜ್ ಭವನರ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ.ಆದರೆ ರಾಜಸ್ತಾನದಲ್ಲಿ ನಾಳೆ ಆ ರೀತಿ ಇರುವುದಿಲ್ಲ ಎಂದು ಹೇಳಿದ್ದಾರೆ.


ಹಿಂದಿನ ದಿನ, ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ್ ಸರ್ಕಾರಕ್ಕೆ ಒಗ್ಗಟ್ಟಿನ ಪ್ರದರ್ಶನದಲ್ಲಿ ಹೇಳಿದರು ಮತ್ತು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ ಭವನದ  ಎದುರು ಗಾಂಧಿವಾದಿ ರೀತಿಯಲ್ಲಿ ಸೋಮವಾರದಂದು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದ್ದರು.


ಈಗ ವಜಾಗೊಳಿಸಿರುವ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಇತರ 18 ಶಾಸಕರ ದಂಗೆಯ ನಂತರ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ.'ನಾವು ರಾಜ್ಯ ಸಚಿವ ಸಂಪುಟದ ಪರಿಷ್ಕೃತ ಟಿಪ್ಪಣಿಯನ್ನು ರಾಜ್ಯಪಾಲರಿಗೆ ಕಳುಹಿಸಿದ್ದೇವೆ ಮತ್ತು ಅಧಿವೇಶನವನ್ನು ಕರೆಯಲು ಅವರು ಶೀಘ್ರದಲ್ಲೇ ಅನುಮೋದನೆ ನೀಡುತ್ತಾರೆ ಎಂದು ಭಾವಿಸುತ್ತೇವೆ ಎಂದು ದೋಟಾಸರಾ ಹೇಳಿದ್ದಾರೆ.


ಅಧಿವೇಶನವನ್ನು ನಡೆಸಲು ಬಯಸಿದೆ ಎಂದು ಕಾಂಗ್ರೆಸ್ ಸರ್ಕಾರ ಹೇಳುತ್ತದೆ ಏಕೆಂದರೆ ಇದರಿಂದ ತನ್ನ ಬಹುಮತವನ್ನು ಸಾಬೀತುಪಡಿಸಬಹುದು ಎನ್ನುವುದು ಅದರ ಉದ್ದೇಶವಾಗಿದೆ.ಅಸೆಂಬ್ಲಿ ಅಧಿವೇಶನಕ್ಕಾಗಿ ರಾಜ್ ಭವನದ ಹುಲ್ಲುಹಾಸಿನ ಮೇಲೆ ಕಾಂಗ್ರೆಸ್ ಶಾಸಕರು ಐದು ಗಂಟೆಗಳ ಧರಣಿ ನಡೆಸಿದ ನಂತರ ಶುಕ್ರವಾರ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ರಾಜ್ಯ ಸರ್ಕಾರದಿಂದ ಆರು ಅಂಶಗಳ ಬಗ್ಗೆ ಸ್ಪಷ್ಟನೆ ಕೋರಿದ್ದರು.



.