ನವದೆಹಲಿ: ದೇಶದಲ್ಲಿ ಅನೇಕ ಹಾಟ್‌ಸ್ಪಾಟ್ ಜಿಲ್ಲೆಗಳು (ಎಚ್‌ಎಸ್‌ಡಿ) ಹಾಟ್‌ಸ್ಪಾಟ್ ಅಲ್ಲದ ಜಿಲ್ಲೆಗಳಾಗಿ (ಎನ್‌ಎಚ್‌ಎಸ್‌ಡಿ) ಬದಲಾಗುತ್ತಿರುವುದರಿಂದ ದೇಶದ ಕರೋನವೈರಸ್ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಭಾರತದಲ್ಲಿ ದೃಢಪಡಿಸಿದ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 26,000 ದಾಟಿದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಂಕಿನ ಹರಡುವಿಕೆಯ ರೇಖೆಯನ್ನು ಸಮತಟ್ಟಾಗಿಸಲು 21 ದಿನಗಳ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದರು. ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಒಟ್ಟು 26,496 ಪ್ರಕರಣಗಳು, ಇದರಲ್ಲಿ 19,868 ಸಕ್ರಿಯ ಪ್ರಕರಣಗಳು, 5,803 ಗುಣಪಡಿಸಿದ ಪ್ರಕರಣಗಳು, 1 ವಲಸೆ ರೋಗಿ ಮತ್ತು ಹಾಗೂ ಒಟ್ಟು 824 ಸಾವುಗಳು ಸೇರಿವೆ.


ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು 7,628; ಗುಜರಾತ್ ನಂತರ 3,071 ಪ್ರಕರಣಗಳು; 2,625 ಪ್ರಕರಣಗಳೊಂದಿಗೆ ದೆಹಲಿ; ರಾಜಸ್ಥಾನದಲ್ಲಿ 2,083 ಪ್ರಕರಣಗಳು ಮತ್ತು ಮಧ್ಯಪ್ರದೇಶದಲ್ಲಿ 2,096 ಪ್ರಕರಣಗಳಿವೆ.


ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಏಪ್ರಿಲ್ 26) ಬೆಳಿಗ್ಗೆ 11 ಗಂಟೆಗೆ ತಮ್ಮ ಮಾಸಿಕ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಇದಕ್ಕೂ ಮೊದಲು  ಪ್ರಧಾನಿ ಮೋದಿ ಅವರು ಮಾರ್ಚ್ 29 ರಂದು ಮನ್ ಕಿ ಬಾತ್ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ ಲಾಕ್ ಡೌನ್ ಕ್ರಮಗಳಿಂದಾಗಿ ವಲಸಿಗರು ಮತ್ತು ಇತರರಿಗೆ ಉಂಟಾದ ಅನಾನುಕೂಲತೆಗಾಗಿ ಕ್ಷಮೆ ಕೋರಿದ್ದರು.