ನವದೆಹಲಿ: ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಅವರು ತಮ್ಮ ವೈಯಕ್ತಿಕ ದೂರವಾಣಿ ಸಂಖ್ಯೆಗೆ ಜೀವ ಬೆದರಿಕೆ ಸಂದೇಶ ಬಂದಿದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಎಸ್ ಎಂಎಸ್ ರೂಪದಲ್ಲಿ ಬಂದಿರುವ ಅನಾಮಧೇಯ ಸಂದೇಶದಲ್ಲಿ ತಮ್ಮನ್ನು ಮುಗಿಸುವ ತೀವ್ರ ಒತ್ತಡದಲ್ಲಿರುವುದಾಗಿ ಎಂದು ಸಂದೇಶ ಕಳುಹಿಸಿದವರು ಹೇಳಿದ್ದಾರೆ. ಅಷ್ಟೇ ಅಲ್ಲದೆ ಅಗತ್ಯ ಬಿದ್ದರೆ ಪ್ರಧಾನ ಮಂತ್ರಿಯವರನ್ನು ಮುಗಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮನೋಜ್ ತಿವಾರಿ ಹೇಳಿದ್ದಾರೆ.


ಈ ಕುರಿತಾಗಿ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಮನೋಜ್ ತಿವಾರಿ 'ಬೆದರಿಕೆ ಬಗ್ಗೆ ನಾನು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ' ಎಂದು ತಿಳಿಸಿದ್ದಾರೆ. ಈ ಸಂದೇಶವು ಹಿಂದಿಯಲ್ಲಿದ್ದು, ಸಂದೇಶ ಕಳುಹಿಸಿದವರು ತಮ್ಮನ್ನು ಮುಗಿಸಲು ತೀವ್ರ ಒತ್ತಡದಲ್ಲಿರುವುದಕ್ಕೆ ಕ್ಷಮಿಸಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ದೆಹಲಿ ಬಿಜೆಪಿ ಮಾಧ್ಯಮ ಸಂಚಾಲಕ ನೀಲಕಾಂತ್ ಬಕ್ಷಿ ಬೆದರಿಕೆ ಬಗ್ಗೆ ಶೀಘ್ರದಲ್ಲೇ ದೂರು ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.


ಶುಕ್ರವಾರ ಮಧ್ಯಾಹ್ನ 12:52 ಕ್ಕೆ ಮನೋಜ್ ತಿವಾರಿ ಅವರ ಮೊಬೈಲ್ ಫೋನ್‌ ಗೆ ಎಸ್‌ಎಂಎಸ್ ಬಂದಿದ್ದು, ಅದನ್ನು ಶನಿವಾರ ಸಂಜೆ ನೋಡಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅವರು ಹೇಳಿದರು.