ಕನೌಜ್: 2019 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೆಶದಲ್ಲಿ ಎಸ್​ಪಿ-ಬಿಎಸ್​ಪಿ ಮೈತ್ರಿಕೂಟ ಬಿಜೆಪಿಗೆ ಕಠಿಣ ಸವಾಲನ್ನು ಒಡ್ಡಿದೆ. ಈಗ ಇಬ್ಬರೂ ತಮ್ಮ ಸ್ನೇಹವನ್ನು ಪರಸ್ಪರ ತೋರಿಸುವುದಕ್ಕೆ ಯಾವುದೇ ಅವಕಾಶ ಬಿಡುವುದಿಲ್ಲ. ಇತ್ತೀಚಿಗೆ ತಮ್ಮ ಹಲವು ವರ್ಷಗಳ ವೈಮಸ್ಯ ತೊರೆದು ಮೈನ್‌ಪುರಿಯಲ್ಲಿ ನಡೆದ ರ‍್ಯಾಲಿಯಲ್ಲಿ ಮುಲಾಯಂ ಸಿಂಗ್ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ, ಗುರುವಾರ  ಕನೌಜ್ ನಲ್ಲಿ ಆಯೋಜಿಸಲಾಗಿದ್ದ ಎಸ್​ಪಿ-ಬಿಎಸ್​ಪಿ ಬೃಹತ್ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಎಸ್​ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಮಾಯಾವತಿಯವರ ಪಾದ ಮುಟ್ಟಿ ನಮಸ್ಕರಿಸಿದರು.



COMMERCIAL BREAK
SCROLL TO CONTINUE READING

ಪಾದ ಮುಟ್ಟಿ ನಮಸ್ಕರಿಸಿದ ಡಿಂಪಲ್ ಯಾದವ್ ರನ್ನು ಆಶಿರ್ವದಿಸಿದ ಮಾಯಾವತಿ ಬಳಿಕ ಎಸ್​ಪಿ-ಬಿಎಸ್​ಪಿ ಬೃಹತ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಎಸ್​ಪಿ-ಬಿಎಸ್​ಪಿ ಮೈತ್ರಿ ಅಭ್ಯರ್ಥಿಯಾಗಿ ಕನೌಜ್ ಕ್ಷೇತ್ರದಿಂದ ಡಿಂಪಲ್ ಯಾದವ್ ಕಣಕ್ಕಿಳಿದಿದ್ದಾರೆ. ಡಿಂಪಲ್ ನಮ್ಮ ಪರಿವಾರದ ಸೊಸೆ. ಎಸ್​ಪಿ-ಬಿಎಸ್​ಪಿ ಕಾರ್ಯಕರ್ತರು ಅವರ ವಿಜಯಕ್ಕಾಗಿ ಒಟ್ಟಾಗಿ ಶ್ರಮಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.


ಎಸ್​ಪಿ-ಬಿಎಸ್​ಪಿ ಮೈತ್ರಿ ನಂತರ ಡಿಂಪಲ್ ಅವರನ್ನು ನನ್ನ ಕುಟುಂಬದ ಸದಸ್ಯೆ, ಸೊಸೆ ಎಂದು ಹೃತ್ಪೂರ್ವಕವಾಗಿ ಸ್ವೀಕರಿಸಿರುವುದಾಗಿ ತಿಳಿಸಿದ ಮಾಯಾವತಿ, ಅಖಿಲೇಶ್ ಯಾದವ್ ನನಗೂ, ಕುಟುಂಬದ ಹಿರಿಯರಿಗೂ ಬಹಳ ಗೌರವ ಪ್ರೀತಿ ತೋರುತ್ತಾರೆ. ಹಾಗಾಗಿಯೇ ಅವರ ಬಗ್ಗೆ ನನಗೂ ವಿಶೇಷ ಪ್ರೀತಿಯಿದೆ. ಇದು ಭವಿಷ್ಯದಲ್ಲೂ ಮುಂದುವರೆಯಲಿದೆ ಎಂದರು.