ನವದೆಹಲಿ: ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಿರುವ ಭಾರತ ಸರ್ಕಾರದ ವಿರುದ್ಧ ಕಟ್ಟಿ ಮಸೆಯುತ್ತಿರುವ ಪಾಕಿಸ್ತಾನ, ಈ ವಿಷಯದ ಬಗ್ಗೆ ಅಂತರರಾಷ್ಟ್ರೀಯ ಹಸ್ತಕ್ಷೇಪವನ್ನು ಬಯಸಿದೆ ಮತ್ತು ಅದಕ್ಕಾಗಿ ವಿಶ್ವಸಂಸ್ಥೆ ಸೇರಿದಂತೆ ವಿಶ್ವದ ಹಲವು ದೇಶಗಳ ಕದ ತಟ್ಟುತ್ತಿದೆ. ಆದರೆ ಎಲ್ಲೆಡೆ ನಿರಾಸೆಯನ್ನೇ ಅನುಭವಿಸಿರುವ ಪಾಕಿಸ್ತಾನ ತಣ್ಣಗಾದಂತೆ ಕಾಣುತ್ತಿಲ್ಲ.  


COMMERCIAL BREAK
SCROLL TO CONTINUE READING

ಈಗ ಪಾಕಿಸ್ತಾನವು ಕೆಲವು ತಂತ್ರಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಅದು ಭಾರತದೊಂದಿಗೆ ಯುದ್ಧವನ್ನು ಬಯಸುತ್ತಿದೆಯೇ ಎಂಬ ಅನುಮಾನ ಮೂಡಿದೆ. ಪಾಕಿಸ್ತಾನ ಭಯೋತ್ಪಾದಕ ಶಿಬಿರಗಳಲ್ಲಿ ಭಯೋತ್ಪಾದಕರಿಗೆ ತರಬೇತಿಯನ್ನು ಹೆಚ್ಚಿಸುವುದರ ಜೊತೆಗೆ ಗಡಿ ನಿಯಂತ್ರಣ ರೇಖೆ ಬಳಿ ಹೆಚ್ಚಿನ ಸೈನಿಕರನ್ನು ನಿಯೋಜಿಸುವ ಕಾರ್ಯದಲ್ಲಿ ತೊಡಗಿದೆ.


ಪಾಕಿಸ್ತಾನ ಗಡಿಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಿರಿ ...


1. ಪಾಕಿಸ್ತಾನ ಸೇನೆಯು ಮಧ್ಯಮ ಶ್ರೇಣಿಯ ಫಿರಂಗಿಗಳನ್ನು ಎಲ್‌ಒಸಿಯಲ್ಲಿ ನಿಯೋಜಿಸಿದೆ.
2. ಎಲ್ಒಸಿ ಉದ್ದಕ್ಕೂ ಪಾಕಿಸ್ತಾನ ಸೇನೆ ಮತ್ತು ಬಿಎಟಿಯ ಪ್ರಚೋದನೆಯನ್ನು ಹೆಚ್ಚಿಸಿದೆ.
3. ಪಾಕಿಸ್ತಾನ ಸೈನ್ಯವು 100 ಎಸ್‌ಎಸ್‌ಜಿ ಕಮಾಂಡೋಗಳನ್ನು ಎಲ್‌ಒಸಿ ಬಳಿ ನಿಯೋಜಿಸಿದೆ.
4. ಜೈಶ್ ಬಾಂಗ್ಲಾದೇಶದ ಹರಿನ್ಮರ ಬೆಟ್ಟದಲ್ಲಿ ತರಬೇತಿ ಶಿಬಿರವನ್ನು ನಡೆಸಲು ಪಾಕ್ ಉತ್ತೇಜನ.
5. ಅಟಾಂಕಿ ಕ್ಯಾಂಪ್‌ನಲ್ಲಿ ರೋಹಿಂಗ್ಯಾ ಹ್ಯಾಂಡ್ಲರ್‌ಗಳಿಗೆ ದಾಳಿಯ ತರಬೇತಿ ನೀಡಲಾಗುತ್ತಿದೆ.
6. ಪಾಕಿಸ್ತಾನ ಸೇನೆಯು ಗುಜರಾತ್‌ನ ಸರ್ ಕ್ರೀಕ್ ಪ್ರದೇಶದಲ್ಲಿ ತನ್ನ ಪ್ರದೇಶದಲ್ಲಿ ವಿಶೇಷ ಸೇವಾ ಗುಂಪು (ಎಸ್‌ಎಸ್‌ಜಿ) ಕಮಾಂಡೋಗಳನ್ನು ನಿಯೋಜಿಸಿದೆ.


20 ದಿನಗಳ ನಂತರ, ಕಣಿವೆಯಲ್ಲಿ ನಡೆದ ಮೊದಲ ಭಯೋತ್ಪಾದಕ ಘಟನೆ:


1. ಟ್ರಾಲ್ ಕಾಡಿನಲ್ಲಿ ಕಾಣೆಯಾದ ಇಬ್ಬರು ವ್ಯಕ್ತಿಗಳ ಶವಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
2. ಖಾದಿರ್ ಕೊಹ್ಲಿ ಮತ್ತು ಮಂಜೂರ್ ಅಹ್ಮದ್ ಕೊಹ್ಲಿ ಸೋಮವಾರದಿಂದ ಕಾಣೆಯಾಗಿದ್ದರು.
3. ಖಾದಿರ್ ಮತ್ತು ಮಂಜೂರ್ ಅವರನ್ನು ಸೋಮವಾರ ಭಯೋತ್ಪಾದಕರು ಅಪಹರಿಸಿದ್ದರು.
4. ಖಾದಿರ್ ರಾಜೌರಿಗೆ ಸೇರಿದವನು ಮತ್ತು ಮಂಜಾರ್ ಅಹ್ಮದ್ ಮನ್ಸಾರ್ ನಿವಾಸಿ.