ಚುನಾವಣಾ ಆಯೋಗವು ಗುರುವಾರ ಟಿಆರ್‌ಎಸ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪಕ್ಷದ ಹೆಸರನ್ನು ತೆಲಂಗಾಣ ರಾಷ್ಟ್ರ ಸಮಿತಿಯಿಂದ ಭಾರತ ರಾಷ್ಟ್ರ ಸಮಿತಿ ಎಂದು ಬದಲಾಯಿಸಲು ಒಪ್ಪಿಕೊಂಡಿದೆ ಎಂದು ತಿಳಿಸಿದೆ. 


COMMERCIAL BREAK
SCROLL TO CONTINUE READING

ಟಿಆರ್‌ಎಸ್‌ಗೆ ಬರೆದ ಪತ್ರದಲ್ಲಿಚುನಾವಣಾ ಆಯೋಗವು 'ಉಲ್ಲೇಖಿಸಲಾದ ವಿಷಯದ ಬಗ್ಗೆ 05-10-2022 ರಂದು ನಿಮ್ಮ ಪಕ್ಷದ ಹೆಸರನ್ನು ತೆಲಂಗಾಣ ರಾಷ್ಟ್ರ ಸಮಿತಿಯಿಂದ ಭಾರತ್ ರಾಷ್ಟ್ರ ಸಮಿತಿಗೆ ಬದಲಾಯಿಸಲು ಆಯೋಗವು ಒಪ್ಪಿಕೊಂಡಿದೆ' ಎಂದು ಅದು ಹೇಳಿದೆ.


ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್ ಅಕ್ಟೋಬರ್ 5 ರಂದು ತನ್ನ ಹೆಸರನ್ನು 'ಬಿಆರ್‌ಎಸ್' ಎಂದು ಬದಲಾಯಿಸುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಮುನ್ನಡಿ ಇಡುವ ಗುರಿಯನ್ನು ಹೊಂದಿದೆ.


ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸಲಾಯಿತು. ರಾವ್ ಅವರು ನಿರ್ಣಯವನ್ನು ಓದಿದರು ಮತ್ತು ಪಕ್ಷದ ಸಾಮಾನ್ಯ ಸಭೆಯು ಟಿಆರ್‌ಎಸ್‌ನಿಂದ ಬಿಆರ್‌ಎಸ್ ಹೆಸರನ್ನು ಬದಲಾಯಿಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.


ನವೆಂಬರ್ 7 ರಂದು ಟಿಆರ್‌ಎಸ್ ಪಕ್ಷವು ತನ್ನ ಹೆಸರನ್ನು ಬಿಆರ್‌ಎಸ್ ಎಂದು ಬದಲಾಯಿಸುವ ಕುರಿತು ಸಾರ್ವಜನಿಕ ಸೂಚನೆಯನ್ನು ನೀಡಿತು ಮತ್ತು ಪ್ರಸ್ತಾವಿತ ಹೊಸ ಹೆಸರಿಗೆ ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ ಚುನಾವಣಾ ಆಯೋಗಕ್ಕೆ ಕಳುಹಿಸಲು ಸಾರ್ವಜನಿಕರಿಗೆ ಕೇಳಿಕೊಂಡಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.