ಮಿರ್ಜಾಪುರ: ಕಾಮಾಖ್ಯ ಎಕ್ಸ್‌ಪ್ರೆಸ್‌ ರೈಲಿನ ಇಂಜಿನ್‌ ಮತ್ತು ಜನರೇಟರ್‌ ರೂಮ್‌ನಲ್ಲಿ ಗುರುವಾರ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದೆ.


COMMERCIAL BREAK
SCROLL TO CONTINUE READING

ಮಿರ್ಜಾಪುರದ ಕೈಲಾಹತ್ ಪ್ರದೇಶದ ಬಳಿ ಗುರುವಾರ ಬೆಳಿಗ್ಗೆ ಈ ಅವಘಡ ಸಂಭವಿಸಿದ್ದು, ರೈಲು 
ಚಲಿಸುತ್ತಿದ್ದಾಗಲೇ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ರೈಲು ನಿಲ್ಲಿಸಿ ಜನರೇಟರ್‌ ರೂಮ್‌ ಮತ್ತು ಸರಕು ಸಾಗಾಣಿಕೆಯ ಬೋಗಿಗಳನ್ನು ಬೇರ್ಪಡಿಸುವ ಮೂಲಕ ಚಾಲಕ ಸಮಯಪ್ರಜ್ಞೆ ಮೆರೆದಿದ್ದಾರೆ. 


ಈ ಘಟನೆಯಲ್ಲಿ ಅದೃಷ್ಟವಷಾತ್‌ ಯಾರಿಗೂ ಗಾಯಗಳಾಗಿಲ್ಲ. ಆದರೆ ದೆಹಲಿ -ಹೌರಾ ಮಾರ್ಗವಾಗಿ ಸಂಚರಿಸುವ ರೈಲುಗಳ ಸಂಚಾರದಲ್ಲಿ ವಿಳಂಬವಾಗಿದ್ದು, ಬೆಂಕಿ ಅವಘಡಕ್ಕೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ.