ಕೊಲ್ಕತಾ: ದಕ್ಷಿಣ ಕೊಲ್ಕತ್ತಾದ  ಮಜೆರಹಾತ್ ನಲ್ಲಿ ಫ್ಲೈಓವರ್ ಕುಸಿದು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.ವರದಿಗಳ ಪ್ರಕಾರ ಐವರು ಅವಶೇಷಗಳಡಿ ಸಿಕ್ಕು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.


COMMERCIAL BREAK
SCROLL TO CONTINUE READING

ಫ್ಲೈಓವರ್ ಕುಸಿದ ನಂತರ ಸ್ಥಳಕ್ಕೆ ರಕ್ಷಣೆಗೆ ಧಾವಿಸಿದ ಅಗ್ನಿ ಶಾಮಕ ದಳ  ಮತ್ತು ಅಂಬುಲನ್ಸ್ ಗಾಯಗೊಂಡವರ ರಕ್ಷಣೆ ಧಾವಿಸಿವೆ. ಪ್ರತ್ಯೆಕ್ಷದರ್ಷಿಗಳು ಹೇಳುವಂತೆ  ಹಲವಾರು ಜನರು  ಫ್ಲೈಓವರ್ ಕುಸಿದ ನಂತರ ಅವಶೇಷಗಳ ಕೆಳಗಡೆ ಸಿಲುಕಿದ್ದಾರೆ ಎನ್ನಲಾಗಿದೆ.



ಇತ್ತೀಚೆಗಿನ ವರದಿ ಪ್ರಕಾರ  ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾನೆ ಎಂದು  ಹೇಳಲಾಗಿದೆ.ಇನ್ನು ಹಲವರು ಅವಶೇಷಗಳ ಕೆಳಗಡೆ ಸಿಲುಕಿರುವ ಸಾಧ್ಯತೆ ಇರುವುದರಿಂದ ಗಾಯಾಳು ಮತ್ತು ಮೃತಪಟ್ಟವರ ಸಂಖ್ಯೆ ಹೆಚ್ಚಲಿದೆ ಎಂದು ತಿಳಿದುಬಂದಿದೆ. 


ಈಗಾಗಲೇ ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ತನಿಖೆಗೆ ಆಗ್ರಹಿಸಿದ್ದಾರೆ.